ವಚನಾನಂದ ಸ್ವಾಮೀಜಿ ಸಾಫ್ಟ್ವೇರ್, ನಾವು ಹಾರ್ಡ್ವೇರ್: ಕಾಶಪ್ಪನವರ್

Team Newsnap
1 Min Read

ವಚನಾನಂದ ಸ್ವಾಮೀಜಿ ಸಾಫ್ಟ್ವೇರ್, ನಾವು ಹಾರ್ಡ್ವೇರ್ ಎಂದು ಹೇಳಿಕೊಂಡವರು, ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್.


ವಚನಾನಂದ ಸ್ವಾಮೀಜಿ ಎಸಿರೂಂನಲ್ಲಿ ಕೂತು ಹೋರಾಟ ಮಾಡುತ್ತಾರೆ. ನಾವು ಬಿಸಿಲಲ್ಲಿ ಹೋರಾಟ ಮಾಡುತ್ತೇವೆ. ಹೋರಾಟಕ್ಕೆ ಬಂದರೆ ಸ್ವಾಗತಿಸುತ್ತೇವೆ. ಯಾವಾಗ ಹೋಗುತ್ತಾರೋ ಬೀಳ್ಕೊಡುತ್ತೇವೆ ಎಂದು ಅವರು ದಾವಣೆಗೆರೆಯಲ್ಲಿ ಹೇಳಿದರು.


ಮೀಸಲಾತಿಗಾಗಿ ಹಮ್ಮಿಕೊಂಡಿದ್ದ ಶ್ರೀಗಳ ಪಾದಯಾತ್ರೆ ಶಾಪದಿಂದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಸ್ಥಾನ ಕಳೆದುಕೊಂಡರು ಎಂದು ಕಾಶಪ್ಪನವರ್ ವ್ಯಾಖ್ಯಾನಿಸಿದರು.

2ಎ ಮೀಸಲಾತಿಗಾಗಿ ಶ್ರೀಗಳಿಗೆ ಪಾದಯಾತ್ರೆ ಮಾಡುವಂತೆ ಮಾಡಿದ್ದರು. ಆದರೂ ಅವರು ( ಯಡಿಯೂರಪ್ಪ) ನೀಡಿದ ಮಾತನ್ನು ಉಳಿಸಿಕೊಳ್ಳಲಿಲ್ಲ. ಹಾಗಾಗಿ ಶ್ರೀಗಳ ಪಾದಯಾತ್ರೆ ಶಾಪ ಅವರಿಗೆ ತಟ್ಟಿದೆ ಎಂದರು.


ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಯಾರಾದ್ರೂ ಸರಿ ಅವರಿಗ ಶಾಪ ತಟ್ಟುತ್ತೆ ಎಂದು ಮಾಜಿ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪರೋಕ್ಷವಾಗಿ ಎಚ್ಚರಿಸಿದರು.

Share This Article
Leave a comment