ಮುಂಬೈ ಶಾಸಕ ಸಿದ್ದಿಕಿ ಮಂಡ್ಯಕ್ಕೆ ಭೇಟಿ – ಮುಸ್ಕಾನಳಿಗೆ ಐ ಫೋನ್ – ಸ್ಮಾರ್ಟ್ ವಾಚ್ ಗಿಪ್ಟ್

Team Newsnap
1 Min Read

ಮಂಡ್ಯದ ಪಿಇಎಸ್ ಕಾಲೇಜ್ ಆವರಣದಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾಥಿ೯ನಿ ಮುಸ್ಕಾನ್ ಳಿಗೆ ಮುಂಬೈನ ಬಾಂದ್ರಾ ಕ್ಷೇತ್ರದ ಶಾಸಕ ಝೀಶನ್ ಸಿದ್ದಿಕಿ ಇಂದು ಸ್ಮಾರ್ಟ್ ವಾಚ್ ಹಾಗೂ ಐಫೋನ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದರು

ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಈ ಉಡುಗೊರೆ ನೀಡಿದ್ದಾನೆ.

ಅಲ್ಲಾಹು‌ ಅಕ್ಬರ್ ಘೋಷಣೆ ಕೂಗಿದ್ದ ಪಿಇಎಸ್ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್.
ಘೋಷಣೆ ಕೂಗಿದ ಬಳಿಕ ಮುಸ್ಲಿಂ ನಾಯಕರಿಂದ ಹಣ, ಉಡುಗೊರೆ ನೀಡಿ ಸನ್ಮಾನಗಳು ಹರಿದು ಬರುತ್ತಿವೆ

ಮಹಾರಾಷ್ಟ್ರದ ಕಾಂಗ್ರೆಸ್‌ನ ಬಾಂದ್ರಾ ಕ್ಷೇತ್ರದ ಶಾಸಕ ಝೀಶನ್ ಸಿದ್ಧಿಕ್ ಮುಸ್ಕಾನ್‌ಗೆ ಐ ಫೋನ್, ಸ್ಮಾರ್ಟ್ ವಾಚ್ ಉಡುಗೊರೆ ನೀಡಿ ಮುಸ್ಕಾನ್ ಘೋಷಣೆ ಕೂಗಿರುವುದು ನನಗೆ ಗರ್ವ ಅನ್ನಿಸಿದೆ. ಅಷ್ಟು ಜನರ ಎದುರು ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾರೆ.
ಅದು ನಮಗೆ ಹೆಮ್ಮೆ ಎನ್ನಿಸುತ್ತಿದೆ.


ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುವಂತಾಗಿದೆ ಹಿಜಾಬ್ ಹಾಕಿಕೊಳ್ಳುವುದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ ಎಂದು ಮುಸ್ಕಾನ್ ಭೇಟಿ ವೇಳೆ ಝೀಶನ್ ಸಿದ್ಧಿಕಿ ಹೇಳಿಕೆ ನೀಡಿದ್ದಾರೆ.

Share This Article
Leave a comment