UPSC ಫಲಿತಾಂಶ 77 ನೇ ರ‍್ಯಾಂಕ್ ಗಳಿಸಿದ ಬೆಂಗಳೂರಿನ ಅಕ್ಷಯ್​ ಸಿಂಹ – ರಾಜ್ಯದ 18 ಮಂದಿ ಪಾಸ್

Team Newsnap
1 Min Read

2020ರ ಸಾಲಿನ ಯುಪಿಎಸ್​​​​​ಸಿ ಫಲಿತಾಂಶ ಪ್ರಕಟವಾಗಿದೆ,
ಶುಭ ಕುಮಾರ್ ಈ ಬಾರಿ ದೇಶದ ಟಾಪರ್. ಈ ವರ್ಷ ಒಟ್ಟು 761 ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.

ಜಾಗೃತಿ ಅವಸ್ಥಿ 2ನೇ ರ್ಯಾಂಕ್ ಗಳಿಸಿದ್ದಾರೆ. ಇನ್ನು ಕರ್ನಾಟಕದಿಂದ ಅಕ್ಷಯ್​ ಸಿಂಹ 77ನೇ ಱಂಕ್ ​​ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಷಯ್​ ಸಿಂಹ ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ವಿದ್ಯಾರ್ಥಿಯಾಗಿದ್ದಾರೆ. 18 ಮಂದಿ ಕರ್ನಾಟಕದ ಗಳು ಐಎಎಸ್ ಪರೀಕ್ಷೆ ಪಾಸ್‌ ಮಾಡಿದ್ದಾರೆ.

2020ರ ಅಕ್ಟೋಬರ್​​ನಲ್ಲಿ ಯುಪಿಎಸ್​ಸಿ ಪ್ರಥಮ ಪರೀಕ್ಷೆ ನಡೆಸಲಾಗಿತ್ತು. 2021ರ ಜನವರಿ 8ರಿಂದ 17ರ ವರೆಗೂ ಆಯೋಗ ಮುಖ್ಯ ಪರೀಕ್ಷೆಯನ್ನು ನಡೆಸಿತ್ತು. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ಕರೆಯಲಾಗಿತ್ತು.

ಪರೀಕ್ಷೆಯನ್ನು ಎದುರಿಸಿರುವ ಅಭ್ಯರ್ಥಿಗಳು https://upsc.gov.in./ ವೆಬ್​​ಸೈಟ್​ ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ.

Share This Article
Leave a comment