2020ರ ಸಾಲಿನ ಯುಪಿಎಸ್ಸಿ ಫಲಿತಾಂಶ ಪ್ರಕಟವಾಗಿದೆ,
ಶುಭ ಕುಮಾರ್ ಈ ಬಾರಿ ದೇಶದ ಟಾಪರ್. ಈ ವರ್ಷ ಒಟ್ಟು 761 ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.
ಜಾಗೃತಿ ಅವಸ್ಥಿ 2ನೇ ರ್ಯಾಂಕ್ ಗಳಿಸಿದ್ದಾರೆ. ಇನ್ನು ಕರ್ನಾಟಕದಿಂದ ಅಕ್ಷಯ್ ಸಿಂಹ 77ನೇ ಱಂಕ್ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಷಯ್ ಸಿಂಹ ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ವಿದ್ಯಾರ್ಥಿಯಾಗಿದ್ದಾರೆ. 18 ಮಂದಿ ಕರ್ನಾಟಕದ ಗಳು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ.
2020ರ ಅಕ್ಟೋಬರ್ನಲ್ಲಿ ಯುಪಿಎಸ್ಸಿ ಪ್ರಥಮ ಪರೀಕ್ಷೆ ನಡೆಸಲಾಗಿತ್ತು. 2021ರ ಜನವರಿ 8ರಿಂದ 17ರ ವರೆಗೂ ಆಯೋಗ ಮುಖ್ಯ ಪರೀಕ್ಷೆಯನ್ನು ನಡೆಸಿತ್ತು. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ಕರೆಯಲಾಗಿತ್ತು.
ಪರೀಕ್ಷೆಯನ್ನು ಎದುರಿಸಿರುವ ಅಭ್ಯರ್ಥಿಗಳು https://upsc.gov.in./ ವೆಬ್ಸೈಟ್ ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ.