ಪಿಕ್ ನಿಕ್ ಗೆ ಬಂದಿದ್ದ ವೇಳೆ ಗಾಣಾಳು ಜಲಪಾತದಲ್ಲಿ ಯುವಕರಿಬ್ಬರು ಕಾಲು ಜಲ ಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಫಾಲ್ಸ್ ನಲ್ಲಿ ಜರುಗಿದೆ.
ಬೆಂಗಳೂರು ಮೂಲದ ಶಾಮ್ ವೆಲ್ (21) ಸಿಬಿಲ್ (22) ಎಂಬ ಯುವಕರ ಸಾವನ್ನಪ್ಪಿದರು.
ವೀಕ್ ಎಂಡ್ ಹಿನ್ನೆಲೆ ಪಿಕ್ನಿಕ್ಗೆ ಬಂದಿದ್ದ ಸ್ನೇಹಿತರು. ಫಾಲ್ಸ್ ಕೆಳಗೆ ನಿಂತಿದ್ದ ವೇಳೆ ಕಾಲುಜಾರಿ ಬಿದ್ದು ಸಾವನ್ನಪ್ಪಿದರು.
ಅರಣ್ಯ ಪಾಲಕರು ಗಮನಿಸಿದಾಗ ಬೆಳಕಿಗೆ ಬಂದ ಘಟನೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.