ರಸ್ತೆ ಅಪಘಾತದಲ್ಲಿ ಮದುಮಗ ಸೇರಿ ಇಬ್ಬರ ಸಾವು

Team Newsnap
0 Min Read

ಬೈಕ್ ಹಾಗೂ ಟಿಪ್ಪರ್ ನಡುವಿನ ಅಪಘಾತದಲ್ಲಿ ಮದುಮಗ ಹಾಗೂ ಮತ್ತೊಬ್ಬ ಯುವಕ ಮೃತಪಟ್ಟ ದಾರುಣ ಘಟನೆ ಮಡಿಕೇರಿಯ ಹೊರವಲಯದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮದುಮಗ ಮೈಸೂರಿನ ವಿಶ್ವನಾಥ್ (32) ಹಾಗೂ ಅತ್ತಿಗೋಡಿನ ದಿನೇಶ್(23) ಅಪಘಾತದಲ್ಲಿ ಜೀವ ಕಳೆದುಕೊಂಡವರು. ಮಡಿಕೇರಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಮದುವೆ ಆಹ್ವಾನ ಪತ್ರ ಕೊಡಲು ದಿನೇಶ್‌ನೊಂದಿಗೆ ವಿಶ್ವನಾಥ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತವಾಗಿದೆ.


ಎಲ್‌ಎಲ್‌ಬಿ ಮುಗಿಸಿ ವೃತ್ತಿ ಆರಂಭಿಸಿದ್ದ ವಿಶ್ವನಾಥ್ ಸೆಪ್ಟೆಂಬರ್ 19 ರಂದು ಹಸೆಮಣೆ ಏರಬೇಕಿತ್ತು. ದಿನೇಶ್ ಪದವಿ ಓದುತ್ತಿದ್ದರು. ಮಡಿಕೇರಿ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Share This Article
Leave a comment