ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ ಮಾಡಿದ ಎರಡು ಕುಟುಂಬದವರಿಗೆ ತಲಾ 10 ಸಾವಿರ ರು ದಂಡ ವಿಧಿಸಿದ ಘಟನೆ ಹಾಸನ ಜಿಲ್ಲೆಯ ಕೊಣನೂರು ಹಾಗೂ ಉಪ್ಪಾರಕೊಪ್ಪಲಿನಲ್ಲಿ ನಡೆದಿದೆ.
ಕೊಣನೂರಿನಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ಭೇಟಿ ನೀಡಿದ ಟಾಸ್ಕ್ಫೋರ್ಸ್ ಅಧಿಕಾರಿ ರಾಜೇಶ್ ಹಾಗೂ ತಂಡ ಮದುವೆ ಆಯೋಜಕರಿಗೆ 10 ಸಾವಿರ ರು ಶಾಮಿಯಾನ ಹಾಕಿದವರಿಗೆ 5 ರು ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ವಿವಿಧ ವಾಹನಗಳನ್ನು ತಡೆದು 4,100 ರು ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸದ ಅತ್ತಿಗುಪ್ಪೆ ಕ್ಲಿನಿಕ್ 20 ಸಾವಿರ ರು ದಂಡ ವಿಧಿಸಿ ಎಚ್ಚರಿಸಿದರು. ಕೊಣನೂರು ಕೇಂದ್ರದಲ್ಲಿ ಒಟ್ಟು 39,100 ರು ದಂಡ ಸಂಗ್ರಹವಾಗಿದೆ.
ರಾಮನಾಥಪುರ ಉಪ ಉಪತಹಶೀಲ್ದಾರ್ ಸಿ.ಸ್ವಾಮಿ, ನೋಡೆಲ್ ಅಧಿಕಾರಿ ಅರುಣ್ ಮತ್ತು ಪಿಡಿಒ ವಿಜಯಕುಮಾರ್ ತಂಡವು ಸಮೀಪದ ಉಪ್ಪಾರಕೊಪ್ಪಲಿನಲ್ಲಿ ಮದುವೆ ಮನೆಗೆ ಭೇಟಿ ನೀಡಿ ಮಾಸ್ಕ್ ಧರಿಸದ ವಧು- ವರನಿಗೆ ತಲಾ 100 ರು ದಂಡ, ಮದುವೆ ಮನೆಯವರಿಗೆ 10 ಸಾವಿರ ರು ದಂಡ ವಿಧಿಸಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ