ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ ಮಾಡಿದ ಎರಡು ಕುಟುಂಬದವರಿಗೆ ತಲಾ 10 ಸಾವಿರ ರು ದಂಡ ವಿಧಿಸಿದ ಘಟನೆ ಹಾಸನ ಜಿಲ್ಲೆಯ ಕೊಣನೂರು ಹಾಗೂ ಉಪ್ಪಾರಕೊಪ್ಪಲಿನಲ್ಲಿ ನಡೆದಿದೆ.
ಕೊಣನೂರಿನಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ಭೇಟಿ ನೀಡಿದ ಟಾಸ್ಕ್ಫೋರ್ಸ್ ಅಧಿಕಾರಿ ರಾಜೇಶ್ ಹಾಗೂ ತಂಡ ಮದುವೆ ಆಯೋಜಕರಿಗೆ 10 ಸಾವಿರ ರು ಶಾಮಿಯಾನ ಹಾಕಿದವರಿಗೆ 5 ರು ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ವಿವಿಧ ವಾಹನಗಳನ್ನು ತಡೆದು 4,100 ರು ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸದ ಅತ್ತಿಗುಪ್ಪೆ ಕ್ಲಿನಿಕ್ 20 ಸಾವಿರ ರು ದಂಡ ವಿಧಿಸಿ ಎಚ್ಚರಿಸಿದರು. ಕೊಣನೂರು ಕೇಂದ್ರದಲ್ಲಿ ಒಟ್ಟು 39,100 ರು ದಂಡ ಸಂಗ್ರಹವಾಗಿದೆ.
ರಾಮನಾಥಪುರ ಉಪ ಉಪತಹಶೀಲ್ದಾರ್ ಸಿ.ಸ್ವಾಮಿ, ನೋಡೆಲ್ ಅಧಿಕಾರಿ ಅರುಣ್ ಮತ್ತು ಪಿಡಿಒ ವಿಜಯಕುಮಾರ್ ತಂಡವು ಸಮೀಪದ ಉಪ್ಪಾರಕೊಪ್ಪಲಿನಲ್ಲಿ ಮದುವೆ ಮನೆಗೆ ಭೇಟಿ ನೀಡಿ ಮಾಸ್ಕ್ ಧರಿಸದ ವಧು- ವರನಿಗೆ ತಲಾ 100 ರು ದಂಡ, ಮದುವೆ ಮನೆಯವರಿಗೆ 10 ಸಾವಿರ ರು ದಂಡ ವಿಧಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ