ಕೊರೋನಾ ಮಹಾಮಾರಿಗೆ ಟಿವಿ ನಿರೂಪಕಿ, ನಟಿ ಕಾನುಪ್ರಿಯ ಬಲಿ

Team Newsnap
0 Min Read

ಕೊರೋನಾ ಮಹಾಮಾರಿಗೆ ಟಿವಿ ನಿರೂಪಕಿ, ನಟಿ ಕಾನುಪ್ರಿಯ ಭಾನುವಾರ ಬಲಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಕಾನುಪ್ರಿಯಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕಾನುಪ್ರಿಯ ಬ್ರಹ್ಮ ಕುಮಾರಿ, ಕರ್ಮಭೂಮಿಯ ನಿರೂಪಕಿಯಾಗಿ, ನಟಿಯಾಗಿ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು.

ಕಳೆದ ಮೂರು ದಿನಗಳ ಹಿಂದೆ ಆಜ್ ತಕ್ ಸುದ್ದಿವಾಹಿನಿ ನಿರೂಪಕ, ಪತ್ರಕರ್ತ ರೋಹಿತ್ ಸರ್ದಾನ್ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದರು.

ಈಗ ದೂರದರ್ಶನ ವಾಹಿನಿ, ಬ್ರಹ್ಮಕುಮಾರಿ ಟಿವಿ ನಿರೂಪಕಿ ಕಾನುಪ್ರಿಯ ಸಾವನ್ನಪ್ಪಿದ್ದಾರೆ.

Share This Article
Leave a comment