ಇನೋವಾ ಕಾರಿಗೆ ಲಾರಿ ಡಿಕ್ಕಿ : ನವ ವರ ಸೇರಿ ಮೂರು ಮಂದಿ ಸಾವು – ನವ ವಧು ಪಾರು : ತುರುವೇಕೆರೆ ಬಳಿ ದುರಂತ

Team Newsnap
1 Min Read

ಇನೋವಾ ಕಾರಿಗೆ ಲಾರಿಯೊಂದು ಡಿಕ್ಕಿ ಪರಿಣಾಮ ನವ ವರ ಸೇರಿ ಮೂರು ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ತುರುವೇಕೆರೆ ಸಮೀಪದ ಚಿಕ್ಕ ಶೆಟ್ಟಿಕೆರೆ ಬಳಿ ಸಂಭವಿಸಿದೆ.

ನವ ವಧು ಮಂದಾರ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅರಸಿಕೆರೆ ತಾಲೂಕು ಕಮಲಾಪುರ ನಿವಾಸಿ ನಂಜುಂಡಪ್ಪನವರ ಮಗ ಪ್ರಸನ್ನ ಕುಮಾರ್ (30)ಸಂತೋಷ್ ( 30) ಹಾಗೂ ಚಾಲಕ ಚಿನ್ನಪ್ಪ ಸಾವನ್ನಪಿದವರು.

ಕಳೆದ ಒಂದುವಾರದ ಹಿಂದಷ್ಟೇ ಮೈಲಾಪುರ ನಿವಾಸಿ ಮಂದಾರ ಜೊತೆ ಪ್ರಸನ್ನ ಕುಮಾರನಿಗೆ ವಿವಾಹ ಮಾಡಿಕೊಡಲಾಗಿತ್ತು.

ತಮ್ಮ ಹಳ್ಳಿಯಿಂದ ಬೆಂಗಳೂರಿಗೆ ಮನೆಯ ಅಗತ್ಯ ವಸ್ತುಗಳನ್ನು ತರಲು ಇಂದು ಬೆಳಗಿನ ಜಾವ ಅರಸಿಕೆರೆ ಕಡೆ ಹೊರಟಾಗ ಚಿಕ್ಕ ಶೆಟ್ಟಿಕೆರೆ ಕಡೆ ಮೈಸೂರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿದೆ

ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment