ನಾಗಮಂಗಲದಲ್ಲಿ ದುರಂತ-ಕೌಟುಂಬಿಕ ಕಲಹ : ಕೆರೆಗೆ ಹಾರಿ ತಂದೆ – ಮಗ ಆತ್ಮಹತ್ಯೆ

Team Newsnap
0 Min Read

ಕೌಟುಂಬಿಕ ಕಲಹದ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು ಮಗುವಿನೊಂದಿಗೆ ಕೆರೆಗೆ ಬಿದ್ದ ದಂಪತಿ.ತಂದೆ-ಮಗು ಸಾವು ಪತ್ನಿ ಪ್ರಾಣಾಪಾಯದಿಂದ ಪಾರು.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿ ಪಿಟ್ಟೆಕೊಪ್ಪಲು ಸಮೀಪದ ಚನ್ನಾಪುರ ಕೆರೆಯಲ್ಲಿ ಈ ಘಟನೆ ಜರುಗಿದೆ.

ಬಿಟ್ಟೆ ಕೊಪ್ಪಲು ಗ್ರಾಮದ ಗಂಗಾಧರ್ ಅಲಿಯಾಸ್ ಗಿರೀಶ್ (36) ದಶ್ವಂತ್(7) ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ತಂದೆ ಮಗ. ಪತ್ನಿ ಸಿಂಧು ಪ್ರಾಣಾಪಾಯದಿಂದ ಪಾರು.

ಸ್ಥಳಕ್ಕೆ ಧಾವಿಸಿರುವ ಬಿಂಡಿಗನವಿಲೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ

Share This Article
Leave a comment