ಮೈಸೂರು : ಸಚಿವರಾದ ನಂತರ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲರು ಸೋಮವಾರ ತಾಯಿ ಚಾಮುಂಡಿ ದೇವರ ದರ್ಶನ ಪಡೆದರು.
ನಾಡಿಗೆ ಸುಭೀಕ್ಷೆಯಾಗಲಿ,ಒಳ್ಳೆಯ ಮಳೆ ಬೆಳೆಯಾಗಲೆಂದು ತಾಯಿಯಲ್ಲಿ ಬೇಡಿಕೊಂಡಿದ್ದೇನೆ ಎಂದು ಸಚಿವರು ಹೇಳಿದರು.
ದಸರಾ ಸಮೀಪವಿರುವ ಕಾರಣ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಂದು ಪ್ರವಾಸೋದ್ಯಮ ಕುರಿತು ಅಧಿಕಾರಿಗಳ ಜೊತೆ ಸಭೆ ಮಾಡಿ ಎಲ್ಲಾ ಮಾಹಿತಿ ಪಡೆದಿದ್ದೇನೆ ಎಂದರು.ಕಾಂಗ್ರೆಸ್ ಬೆಂಬಲಿತ ಬೋರೇಗೌಡ ಮನ್ ಮುಲ್ ಅಧ್ಯಕ್ಷರಾಗಿ ಆಯ್ಕೆ
ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
![WhatsApp Image 2023 07 21 at 9.21.33 PM 2](https://kannada.thenewsnap.com/wp-content/uploads/2023/07/WhatsApp-Image-2023-07-21-at-9.21.33-PM-2-1024x1024.jpeg)