ನಾಳೆ ಅರಕೆರೆಯಲ್ಲಿ ನಾಮ ಸಹಸ್ರಂ‌

Team Newsnap
0 Min Read

ಮಂಡ್ಯದ ವಿವೇಕ ಶಿಕ್ಷಣ ವಾಹಿನಿ ಮತ್ತು ಅರಕೆರೆ ಪೂರ್ಣಿಮಾ ವಿದ್ಯಾಸಂಸ್ಥೆ, ಸಹಯೋಗದಲ್ಲಿ ನಾಳೆ ಬೆಳಿಗ್ಗೆ 8 ರಿಂದ 11 ಗಂಟೆವರೆಗೆ ವಿಷ್ಣು ಸಹಸ್ರನಾಮದ ನಾಮ ಸಹಸ್ರಂ ಕಾರ್ಯಕ್ರಮ ಆಯೋಜಿಸಲಾಗಿದೆ.

ಪೂರ್ಣಿಮಾ ವಿದ್ಯಾಶಾಲೆಯ 50 ಕ್ಕೂ ಹೆಚ್ಚು ಮಕ್ಕಳಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಸರಸ್ವತಿ ಹೋಮ ಮತ್ತು ದಿವ್ಯ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಜೀ ಮಹಾರಾಜ್‌ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

Share This Article
Leave a comment