ಮೊದಲು ನೆನಪಿಗೆ ಬರುವನು
ಅವನು, ನನ್ನ ಅಂತರಂಗದ ಗೆಳೆಯ
ನಂತರ ನೀನು ಅವನ ಬಾಳ ಗೆಳತಿ
ನನಗೆ ಗೊತ್ತು ಅವನೀಗ ಇಲ್ಲಿಲ್ಲ
ಬೆಂದು ಹೋಗಿದೆ ನೊಂದು ಜೀವ
ಅಪರಕರ್ಮವ ಮಾಡಲಾಗಲಿಲ್ಲ
ಸ್ವರ್ಗ ಸೇರಿದನೊ ಇಲ್ಲವೊ ಎಂದು
ಕೊರಗಿ ಬಸವಳಿದು ಬೇಸರಿಸದಿರು
ಕಾಣು ನೀನವನನ್ನು ದಿನನಿತ್ಯವೂ
ಅವನ ಮಕ್ಕಳೊಳಗೆ, ಬತ್ತದ ಸೆಲೆಯ ನೆಲೆಯದು ನಿನ್ನ ಮನಮಾಡಿನೊಳಗೆ
ಯೋಚಿಸರಲಿಲ್ಲ ಅವ ಸಾವಿನ ಬಗ್ಗೆ
ಅಥವಾ ನಿನ್ನ ಬಿಟ್ಟು ಹೋಗುವ ಬಗ್ಗೆ
ಚಿಂತಿಸಿದ ಯಾವಾಗಲೂ ಬದುಕನ್ನು ಸಂಪೂರ್ಣ ನಿನ್ನೊಂದಿಗೆ ಕಳೆವುದಕೆ
ನೋಡ ಬಯಸಿದ್ದನವ ಹೊಸ ಜಾಗ
ಹೊಸ ಸಿನಿಮಾ ಸಿರಿಯಲ್ಲು ಉಡುತ್ತ
ಹೊಸಬಟ್ಟೆ ಬಳಗ ಆಮೋದ ಪ್ರಮೋದ
ಅವನಲ್ಲಿತ್ತು ಆಕಾಶದಷ್ಟು ಆಲೋಚನೆ ಯಾರಿಗೂ ಹೇಳಲಿಲ್ಲ ಯಾಕೆಂದರೆ ಬದುಕುವೆನೆಂದಷ್ಟೆ ಭಾವಿಸಿದ್ದ ದುಡಿದು
ಅಪರಿಮಿತ ಕಷ್ಟದಲಿ ಕೂಡಿದ ಹಣವ
ಖರ್ಚು ಮಾಡಬಯಸಿದ್ದ ನಿನ್ನೊಂದಿಗೆ
ಬರಿಗೈಯ ಋಣದಿಂದ ಶೂನ್ಯಕ್ಕೇರಿ ಸಂಪಾದಿಸಿದ್ದ ಮುಗಿಲೆತ್ತರ ಸುರಿಸಿ
ಬೆವರು ಕೂಡಿ ಒಂದೊಂದು ರೂಪೈ
ನಿಂತನೆದ್ದ ಸರೀಕರಲಿ ಸಮಾಜದಲಿ
ಗಣ್ಯನಾಗಿ ಮಾನ್ಯನಾಗಿ ವಿನೀತನಾಗಿ
ಆಲೋಚಿಸವನ ಯೋಜನೆಗಳ ಬಗ್ಗೆ
ನನಸಾಗಬೇಕಾದ ಕನಸುಗಳು ಬುಗ್ಗೆ
ಆಗಬೇಕಾದ ಕೆಲಸಕೆ ಹಾಕುತ್ತ ಲಗ್ಗೆ
ಪ್ರೀತಿಸು ಮಕ್ಕಳ ದುಪ್ಪಟ್ಟು ಅವನ
ನೆನಪನ್ನು ಚಿರವಾಗಿ ಎದೆಯಲಿಟ್ಟು
ಹರಿಯದಿರಲಿ ಕಣ್ಣೀರು, ನೀನತ್ತಾಗ ನೋವಾಗತ್ತಿತ್ತು ಅವನಿಗೆ ಬಹಳ
ನಿನಗದು ಗೊತ್ತು ಆದಕೆ ನವಿರಾಗಿ ಪ್ರೀತಿಯಲಿ ಅವನ ನೆನಪಿಸಿಕೊ
ನಗುತಲಿರು ಸಂತಸದಿ ಚಿರವಾಗಿ.
…ಬೆಂ ಶ್ರೀ ರವೀಂದ್ರ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ