ಎರಡು ದಿನ ಸಂಪೂರ್ಣ ಲಾಕ್ ಡೌನ್ ಆದ ಬಳಿಕ ಅಗತ್ಯ ವಸ್ತುಗಳ ಖರೀದಿಗೆ ಗುರುವಾರ ಬೆಳಿಗ್ಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಅಗತ್ಯವಸ್ತು ಖರೀದಿಗೆ ಮಂಡ್ಯ ಜನ ಮುಗಿಬಿದ್ದರು
ಮಂಡ್ಯದ APMC ಮಾರುಕಟ್ಟೆಯಲ್ಲಿ ಜನಜಂಗುಳಿ:
ತರಕಾರಿ, ಹಣ್ಣು ಖರೀದಿ ವೇಳೆ ಕೊವಿಡ್ ನಿಯಮ ಮರೆತ ಜನರು. ಸಾಮಾಜಿಕ ಅಂತರ ಕಾಪಾಡದೆ ಗುಂಪು ಗುಂಪಾಗಿ ಖರೀದಿ ಮಾಡಿದ ದೃಷ್ಯ ಮಂಡ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾಣಬಹುದಿತ್ತು.
ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ :
ಮಾರುಕಟ್ಟೆ ಮುಂಭಾಗ ಲಾಠಿ ಹಿಡಿದು ಜನರನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದರು. ಮಾರ್ಕೆಟ್ ಮುಂಭಾಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಈ ವಾರ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿರುವ ಜಿಲ್ಲಾಡಳಿತ ಇಂದು ಅಗತ್ಯ ವಸ್ತುಗಳ ಖರೀದಿ ಅವಕಾಶ. ಮತ್ತೆ ಶುಕ್ರವಾರ, ಶನಿವಾರ ಸಂಪೂರ್ಣ ಲಾಕ್.
ತರಕಾರಿ, ದಿನಸಿ ಖರೀದಿ ವೇಳೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವ ಜನರು.
ಮದ್ಯ ಖರೀದಿಯಲ್ಲಿ ಮುಗಿ ಬಿದ್ದ ಜನ :
ಮಂಡ್ಯದಲ್ಲಿ ಎರಡು ದಿನಗಳ ಬ್ರೇಕ್ ನಂತರ ಮದ್ಯ ( ಎಣ್ಣೆ) ಖರೀದಿಗೆ ಮುಗಿ ಬಿದ್ದ ಜನರು.
ಮಂಡ್ಯದ ಬಹುತೇಕ ಮದ್ಯದಂಗಡಿಗಳು ಫುಲ್ ರಷ್, ಬೆಳಿಗ್ಗೆ ಖರೀದಿಗೆ ಮುಗಿಬಿದ್ದ ಜನ.
ಇಂದು ಬೆಳಗೆ 6 ರಿಂದ10 ವರೆಗೆ ಮಾತ್ರ ಎಣ್ಣೆ ಖರೀದಿಗೆ ಅವಕಾಶ. ನಿನ್ನೆ ಮತ್ತು ಮೊನ್ನೆ ಎರಡು ದಿನ ಎಣ್ಣೆ ಮಾರಾಟಕ್ಕೂ ನಿಷೇಧವಿದಿಸಿದ್ದ ಜಿಲ್ಲಾಡಳಿತ.
ನಾಳೆ ಮತ್ತು ನಾಳಿದ್ದು ಸಹ ಎಣ್ಣೆ ಮಾರಾಟಕ್ಕೆ ಬ್ರೇಕ್. ಹೀಗಾಗಿ ಇಂದೇ ಖರೀದಿಯ ಭರಾಟೆಯಲ್ಲಿ ಮದ್ಯ ಪ್ರಿಯರು.
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ
- ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ
- ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು : ಅಮಿತ್ ಶಾ
- ಪೆನ್ ಡ್ರೈವ್ ಕೇಸ್: ಹಾಸನದ 18 ಕಡೆಗಳಲ್ಲಿ ಎಸ್ ಐಟಿ ಶೋಧ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India