S.R.ವಿಶ್ವನಾಥ್​ ಹತ್ಯೆಗೆ ಸಂಚು ಆರೋಪ; ಕಾಂಗ್ರೆಸ್​ ಮುಖಂಡ ​ಗೋಪಾಲಕೃಷ್ಣ ಸಿಸಿಬಿ ವಶಕ್ಕೆ

Team Newsnap
1 Min Read

ಬಿಜೆಪಿ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್​​.ವಿಶ್ವನಾಥ್​ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಕಾಂಗ್ರೆಸ್​ ಮುಖಂಡ ಗೋಪಾಲಕೃಷ್ಣನನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್​ ಮುಖಂಡ ಎಂ.ಎನ್.ಗೋಪಾಲಕೃಷ್ಣ ವಿರುದ್ಧ ಕೊಲೆ ಸಂಚು ರೂಪಿಸಿದ ಆರೋಪ ಈಗ ಕೇಳಿಬಂದಿದೆ.

ಕೊಲೆಗೆ ಸಂಚು ರೂಪಿಸಿ ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದೆಯಂತೆ ಈ ಹಿನ್ನೆಲೆಯಲ್ಲಿ ಗೋಪಾಲಕೃಷ್ಣ ಅವರನ್ನ ವಶಕ್ಕೆ ಪಡೆದು ನಿನ್ನೆ ತಡರಾತ್ರಿವರೆಗೂ ತನಿಖೆ ನಡೆಸಲಾಗಿದೆ.

ವಿಶ್ವನಾಥ್ ಬೆಂಬಲಿಗನೇ ಬಂಧನ :

ತನಿಖೆ ವೇಳೆ ವಿಶ್ವನಾಥ್ ಬೆಂಬಲಿಗ ದೇವರಾಜ್ ಅಲಿಯಾಸ್ ಕುಳ್ಳದೇವರಾಜ್ ಎಂಬಾತನನ್ನೂ ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.

ಈ ಕುಳ್ಳದೇವರಾಜ್, ಕಾಂಗ್ರೆಸ್​ ಮುಖಂಡ ಗೋಪಾಲಕೃಷ್ಣ, ಎಸ್​.ಆರ್. ವಿಶ್ವನಾಥ್ ಬಗ್ಗೆ ಮಾತನಾಡಿದ್ದನ್ನು ವಿಡಿಯೋ ಮಾಡಿದ್ದಾನೆ ಎನ್ನಲಾಗಿದೆ. ಅಂದ್ಹಾಗೆ ಈ ಹಿಂದೆ ಯಲಹಂಕ ವಿಧಾನಸಭೆ ಕ್ಷೇತ್ರದಲ್ಲಿ ಗೋಪಾಲಕೃಷ್ಣ, ವಿಶ್ವನಾಥ್ ವಿರುದ್ಧ ಎರಡು ಬಾರಿ ಸ್ಪರ್ಧಿಸಿ ಸೋತಿದ್ದರು.

Share This Article
Leave a comment