ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತನ ಮಗಳು ಸೋನಾಲ್ (26) ರಾಜಸ್ಥಾನದಲ್ಲಿ ನ್ಯಾಯಾಧೀಶೆ ಹುದ್ದೆಗೆ ಆಯ್ಕೆ ಯಾಗಿದ್ದಾಳೆ.
2018ರಲ್ಲಿ ಆರ್ಜೆಎಎಸ್ ಪರೀಕ್ಷೆ ಪಾಸ್ ಮಾಡಿದ್ದ ಸೋನಾಲ್ ತರಬೇತಿ ಪೂರ್ಣಗೊಳಿಸಿದ್ದಾರೆ. ಕೆಲವೇ ದಿನಗಳಲ್ಲಿ ನ್ಯಾಯಾಧೀಶೆಯಾಗಿ ನೇಮಕ ಆಗಲಿದ್ದಾರೆ.
ಸೋನಾಲ್ ಎಲ್ಎಲ್ಬಿ ಹಾಗೂ ಎಲ್ಎಲ್ಎಂ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇದಾದ ಬಳಿಕ ಒಂದು ವರ್ಷಗಳ ತರಬೇತಿ ಪೂರ್ಣಗೊಳಿಸಿದ ಸೋನಾಲ್ ರಾಜಸ್ಥಾನದ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಗೊಳ್ಳಲಿದ್ದಾರೆ.
ತಂದೆ ಲಾಲ್ ಶರ್ಮಾರ ಹೈನೋದ್ಯಮಕ್ಕೂ ಸಹಾಯ ಮಾಡೋ ಸೋನಾಲ್, ಪದವೀಧರೆಯಾಗಿದ್ದರೂ ಸಹ ಬೆಳಗ್ಗೆ 4 ಗಂಟೆಗೇ ಎದ್ದು ಹಸುವಿನ ಹಾಲು ಕರೆಯೋದು, ಕೊಟ್ಟಿಗೆ ಸ್ವಚ್ಛಗೊಳಿಸೋದು, ಸಗಣಿ ಸಂಗ್ರಹಿಸೋದು ಜೊತೆಗೆ ಮನೆ ಮನೆಗೆ ತೆರಳಿ ಹಾಲನ್ನೂ ನೀಡುತ್ತಾರೆ.
ಕಳೆದ ವರ್ಷ ಡಿಸೆಂಬರ್ನಲ್ಲೇ ಫಲಿತಾಂಶ ಘೋಷಣೆಯಾಗಿತ್ತು. ಆದರೆ ಸೋನಾಲ್ ಕಟ್ ಆಫ್ ಅಂಕಕ್ಕಿಂತ 1 ಅಂಕ ಕಡಿಮೆ ಪಡೆದ ಕಾರಣ ಅವಕಾಶ ಲಭ್ಯ ವಾಗಿರಲಿಲ್ಲ.
ಈಗ ಆಯ್ಕೆಯಾದ ಕೆಲ ವಿದ್ಯಾರ್ಥಿಗಳು ಸೇವೆಗೆ ನೇಮಕವಾಗದ ಕಾರಣ ಸೋನಾಲ್ ಅದೃಷ್ಟ ಒಲಿದು ಬಂದಿದೆ.
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು
- ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ