ಮಂಡ್ಯದಲ್ಲಿ ಭಾರಿ ಸ್ಫೋಟದ ಶಬ್ಧ: ಆತಂಕಗೊಂಡ ಜನತೆ

Team Newsnap
0 Min Read

ಮಂಡ್ಯ ನಗರದಕಾವೇರಿ ನಗರ, ದ್ವಾರಕ ನಗರ , ಕಾರಸವಾಡಿ ರಸ್ತೆ ವಿನಾಯಕ ಬಡಾವಣೆ ಸೇರಿದಂತೆ ವಿವಿದೆಡೆ ಭಾರಿ ಸ್ಫೋಟದ ಶಬ್ಧವೊಂದು ಜನರಲ್ಲಿ ಆತಂಕ ಹುಟ್ಟಿಸಿತು.

ಈ ಶಬ್ದವು 2 ಘಂಟೆ 33 ನಿಮಿಷದಲ್ಲಿ ಕೇಳಿ ಬಂತು. ಈ ಶಬ್ಧಕ್ಕೆ ಮನೆಗಳ ಕಿಟಕಿ ಬಾಗಿಲು ಅಲುಗಾಡಿದವು. ಮನೆಯಲ್ಲಿ ಇದ್ದವರ ಎದೆ ನಡುಕ ಉಂಟಾಯಿತು.

ಈ ಶಬ್ಧದ ನಂತರ ಆಕಾಶದಲ್ಲಿ ಜೆಟ್ ವೊಂದು ಹಾರಿ ಹೋಯಿತು ಎಂದು ಪ್ರತ್ಯಕ್ಷ ದಶಿ೯ಗಳು ತಿಳಿಸಿದ್ದಾರೆ.

Share This Article
Leave a comment