ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೆಳಗಾವಿಯ ರಾಮದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹತ್ಯೆ ನಡೆದ 4 ಗಂಟೆಗಳಲ್ಲೇ ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಇದನ್ನು ಓದಿ –ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿರ್ಮಾಪಕನಿಗೆ ಹೈ ಬಿಪಿ ಆಸ್ಪತ್ರೆಗೆ ದಾಖಲು
ಬಂಧಿತರು ಮಹಾಂತೇಶ್, ಮಂಜುನಾಥ್ ಮುಂಬೈ ಕಡೆ ಹೊರಟಿದ್ದರು. ಹತ್ಯೆ ನಂತರ ಕಾರಿನಲ್ಲೇ ಬಟ್ಟೆ ಬದಲಿಸಿ ಪರಾರಿಯಾಗಲು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿಸಿದ್ದೇ ಒಂದು ರೋಚಕ ಸಂಗತಿ :
ಹತ್ಯೆ ಮಾಡಿದ ನಂತರ ಮುಂಬೈ ಗೆ ಪರಾರಿಯಾಗಲು ಹಂತಕರು ಪ್ಲಾನ್ ಮಾಡಿದ್ದರು. ಬೆಳಗಾವಿ ಮೂಲಕ ಮುಂಬೈಗೆ ಕಾರಿನಲ್ಲಿ ಹೋಗುವುದಕ್ಕೂ ಮುನ್ನ ಬಟ್ಟೆ ಬದಲಿಸಿದ್ದರು. ಪೋಲಿಸರು ಹಂತಕರ ಸುಳಿವು ಅರಿತು, ರಾಮದುರ್ಗ ಬಳಿ ರಸ್ತೆಗೆ ಅಡ್ಡಲಾಗಿ ಜೆಸಿಬಿ ಹಾಗೂ ಇತರ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ಹಂತಕರ ಕಾರನ್ನು ಅಡ್ಡ ಹಾಕಿ ನಿಲ್ಲಿಸಿದರು. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ ಗುಂಡು ಹೊಡೆಯುವುದಾಗಿ DYSP ಎಚ್ಚರಿಕೆ ನೀಡಿದ ಮೇಲೆ ಸಾರ್ವಜನಿಕರ ಸಹಕಾರದಿಂದ ಆರೋಪಿಗಳನ್ನು ಬಂಧನ ಮಾಡಲಾಯಿತು.
ಮೊಬೈಲ್ ಲೋಕೇಶನ್ ಮೂಲಕ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.