ಗುರುವನ್ನು ಬಿಡುಗಡೆಮಾಡಿಸಲು ಹೋಗಿ ಗಾಂಜಾ ಮಾರಿ ಬಂಧನಕ್ಕೆ ಒಳಗಾದ ರೌಡಿ ರಾಹುಲ್ ಶಿಷ್ಯರು

Team Newsnap
1 Min Read

ಬೆಂಗಳೂರಿನ ರೌಡಿಶೀಟರ್​ ರಾಹುಲ್ ಅಲಿಯಾಸ್​ ಸ್ಟಾರ್ ರಾಹುಲ್ ನನ್ನು ಜೈಲಿನಿಂದ ರಿಲೀಸ್​ ಮಾಡಿಸೋಕೆ ಗಾಂಜಾ ಮಾರಾಟಕ್ಕೆ ಇಳಿದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ

ರೌಡಿಶೀಟರ್​ ರಾಹುಲ್ ನನ್ನು ಶೂಟ್ ಮಾಡಿ ಪೊಲೀಸರು ಕಂಬಿ ಹಿಂದೆ ನಿಲ್ಲಿಸಿದ್ದರು. ಈ ವೇಳೆ ತಮ್ಮ ಗುರುವನ್ನು ಬಿಡಿಸಲು ಶಿಷ್ಯರಾದ ಕಿರಣ್,ಮಂಜು,ಕಾರ್ತಿಕ್​ಗೆ ಹಣದ ಅವಶ್ಯಕತೆ ಎದುರಾಗಿತ್ತು.

ರಾಹುಲ್​ ಅರೆಸ್ಟ್ ಆದ ಮಾರನೇ ದಿನವೇ ಗಾಂಜಾ ಮಾರಾಟಕ್ಕೆ ಇಳಿದ ಇವರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ.

ಕುಳ್ಳ ರಿಜ್ವಾನ್, ಗುಡ್ಡೆ ಭರತ ಆಂಧ್ರದಿಂದ ಕಳಿಸಿದ 20 ಕೆಜಿ ಗಾಂಜಾ ಪಡೆದು ಆರೋಪಿಗಳು ಕೆ.ಆರ್.ರಸ್ತೆಯಲ್ಲಿ ಮಾರಾಟಕ್ಕೆ ತೊಡಗಿದ್ದರು.

ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮೂವರನ್ನು ಬಂಧಿಸಿದರು. ಬಂಧಿತರಿಂದ 20 ಕೆಜಿ ಮೌಲ್ಯದ ಗಾಂಜಾ,ಒಂದು ಕಾರು ಒಂದು ಲಾಂಗ್ ವಶಕ್ಕೆ ಪಡೆದಿದ್ದಾರೆ.

ಕುಳ್ಳ ಗುರು ಮತ್ತು ಗುಡ್ಡೆ ಭರತ್ ಮಾತ್ರ​ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಐವರ ವಿರುದ್ಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a comment