ತನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದ ಲೇಡಿ ಸಿಡಿ ಬಿಡುಗಡೆಯಾಗಿ 28 ದಿನಗಳ ನಂತರ ಪ್ರತ್ಯಕ್ಷವಾಗಿದ್ದಾಳೆ.
ಸಿಆರ್ಪಿಸಿ 164 ಸ್ಟೇಟ್ ಮೆಂಟ್ ರಿಜಿಸ್ಟರ್ ಮಾಡಿಸಲು ನ್ಯಾಯಾಲಕ್ಕೆ ಲೇಡಿ ಬಂದಾಗಿದೆ. ಈ ಬಗ್ಗೆ ವಕೀಲ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ನರೇಶ್ ಗೌಡ ಯಾರೂ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಗೌಪ್ಯತೆ ಕಾಪಾಡಬೇಕಿದ್ದ ಕಾರಣ ಯಾರಿಗೂ ಗೊತ್ತಾಗದ ಹಾಗೆ ಕರೆದುಕೊಂಡು ಬಂದಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.
ಎಸ್ಐಟಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ಅಗತ್ಯ ಇದೆ ಎಂದು ಕರೆದುಕೊಂಡು ಹೋಗುತ್ತಾರೆಯೋ ಎಂಬುದನ್ನು ನೋಡಬೇಕು
ನೃಪತುಂಗ ರಸ್ತೆಯಲ್ಲಿ ಇರುವ ನ್ಯಾಯಾಲಯದ ಆವರಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ ನ್ಯಾಯಾಲಯದ ಕಾರ್ಯ ಕಲಾಪ ಮುಗಿದ ಮೇಲೆ ವಿವರ ನೀಡುತ್ತೇವೆ ಎಂದು ತಿಳಿಸಿದರು. ಈ ರೀತಿಯ ಪ್ರಕರಣದಲ್ಲಿ ಮಹಿಳೆ ನೀಡುವ ಹೇಳಿಕೆ ಮುಖ್ಯವಾಗುತ್ತದೆ.