ಸಂಕಷ್ಟ ದಿಂದ ಪಾರು‌ ಮಾಡು ಎಂದು ಮನೆವದೇವರ ಮೊರೆ ಹೋದ ರಮೇಶ್

Team Newsnap
0 Min Read

ರಾಜ್ಯ ರಾಜಕಾರದಲ್ಲಿ ಬಿರುಗಾಳಿ ಎಬ್ಬಿಸಿರುವ ಸಿಡಿ ವಿವಾದದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಂಕಷ್ಟ ನಿವಾರಣೆಗಾಗಿ ತಮ್ಮ ಮನೆ ದೇವರ ಮೊರೆ ಹೋಗಿದ್ದಾರೆ.

ದೈವ ಭಕ್ತರಾಗಿರುವ ರಮೇಶ್​ ಜಾರಕಿಹೊಳಿ ಮಂಗಳವಾರ ತಮ್ಮ ಗೋಕಾಕ್ ನಿವಾಸದಿಂದ ನೇರವಾಗಿ ಕೋಲಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.

ಇತ್ತ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಎಲ್ಲರ ಕಣ್ತಪ್ಪಿಸಿ ಕೋರ್ಟ್​ಗೆ ಹಾಜರಾಗಿ ಆಕೆ ನೀಡುವ ಹೇಳಿಕೆಯಿಂದ ಪ್ರಕರಣಕ್ಕೆ ಬಹುಮುಖ್ಯವಾಗಿದೆ.

Share This Article
Leave a comment