ಬೆಂಗಳೂರಿನ ಯುವತಿಯೊಬ್ಬಳು ಜ್ಞಾನಭಾರತಿಯ ಉಲ್ಲಾಳ ರಸ್ತೆಯ ಮಂಗಳೂರು ಕಾಲೇಜ್ ಬಳಿ ನೆಕ್ಸನ್ ಕಾರಿನ ಬಾನೆಟ್ ಮೇಲೆ ಎರಡು ಕಿಲೋಮೀಟರ್ ಬೈಕ್ ಸವಾರ ಸುತ್ತಾಡಿದ್ದಾನೆ. ಈ ಕಾರು ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿದೆ.
ಕಳೆದ ವಾರ ಮಾಗಡಿ ರಸ್ತೆಯಲ್ಲಿ ಬೈಕ್ ನಲ್ಲಿ ವೃದ್ಧನನ್ನು ಎಳೆದೊಯ್ದ ಭೀಕರ ಘಟನೆ ಮಾಸುವ ಮುನ್ನವೇ ಮತ್ತೊಂದು ಭಯಾನಕ ಘಟನೆ ನಡೆದಿದೆ.ಮಂಗಳೂರು ಡ್ರಗ್ಸ್ ದಂಧೆ – ಕೆಎಂಸಿ ಆಸ್ಪತ್ರೆಯ ವೈದ್ಯರು ವಜಾ, ವಿದ್ಯಾರ್ಥಿಗಳು ಅಮಾನತು
ಶುಕ್ರವಾರ ಬೆಳಿಗ್ಗೆ 10.30ರ ಸುಮಾರಿಗೆ ಮಹಿಳೆಯೊಬ್ಬಳು ನೆಕ್ಸನ್ ಕಾರನ್ನು ಓಡಿಸುತ್ತಿದ್ದು, ರೆಡ್ ಸಿಗ್ನಲ್ ಇದ್ದರೂ ಕಾರನ್ನು ತಂದು ಅಡ್ಡ ನಿಲ್ಲಿಸಿದ್ದಳು. ಈ ವೇಳೆ ಸಿಗ್ನಲ್ ಇರುವುದು ಕಾಣಿಸಲ್ವಾ ಎಂದು ಬೈಕ್ ಸವಾರ ಕೇಳಿದ್ದಕ್ಕೆ ಆಕೆ ಮಧ್ಯದ ಬೆರಳು ತೋರಿಸಿ ಎಸ್ಕೇಪ್ ಆಗುತ್ತಿದ್ದಳು.
ಈ ವೇಳೆ ಕಾರಿನ ಬಾನೆಟ್ ಮೇಲೆ ಹತ್ತಿ ಬೈಕ್ ಸವಾರ ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಆದರೆ ಮಹಿಳೆ ಕಾರು ನಿಲ್ಲಿಸದೇ, ಮಂಗಳೂರು ಕಾಲೇಜಿನಿಂದ ಎರಡು ಕಿಲೋಮೀಟರ್ ಕಾರನ್ನು ವೇಗವಾಗಿ ಓಡಿಸಿದ್ದಾಳೆ.
ಬೈಕ್ ಸವಾರನ ಪರದಾಟ ನೋಡಿ ಸ್ಥಳೀಯರು ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ. ಬಳಿಕ ಕಾರು ಜಖಂ ಮಾಡಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ಸ್ಥಳೀಯರು ಕಾರು ತಂದಿದ್ದಾರೆ. ಸದ್ಯ ಎರಡೂ ಕಡೆಯವರನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ.
- ಚುನಾವಣೆಯ ವೇಳೆ ಇಡಿ, ಸಿಬಿಐ ನಿಂದ ಡಿಕೆಶಿ, ಪುತ್ರಿ ಐಶ್ವರ್ಯಗೆ ಶಾಕ್
- ಲಂಚ ಸ್ವೀಕಾರ : ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ
- 17 ಗಂಟೆಗಳ ಕಾಲ ಪುಟ್ಟ ಕಂದನನ್ನು ಕಾಪಾಡಿದ ಏಳು ವರ್ಷದ ಅಕ್ಕ !
- 7 ನೇ ವೇತನ ಆಯೋಗ : ರಾಜ್ಯ ಸರ್ಕಾರಿ ನೌಕರರಿಗೆ ಮಾರ್ಗಸೂಚಿ ಪ್ರಕಟ
- ರೆಪೊ ದರ ಮತ್ತೆ ಹೆಚ್ಚಿಸಿದ ಆರ್ ಬಿ ಐ : ಸಾಲದ ಕಂತು ಏರಿಕೆ
- ಬ್ರಾಹ್ಮಣರು ಈ ದೇಶಕ್ಕೆ ಸಂಸ್ಕಾರ ಕೊಟ್ಟಿದ್ದಾರೆ :ಡಿ ಸಿ ತಮ್ಮಣ್ಣ
More Stories
ಚುನಾವಣೆಯ ವೇಳೆ ಇಡಿ, ಸಿಬಿಐ ನಿಂದ ಡಿಕೆಶಿ, ಪುತ್ರಿ ಐಶ್ವರ್ಯಗೆ ಶಾಕ್
ಲಂಚ ಸ್ವೀಕಾರ : ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ
17 ಗಂಟೆಗಳ ಕಾಲ ಪುಟ್ಟ ಕಂದನನ್ನು ಕಾಪಾಡಿದ ಏಳು ವರ್ಷದ ಅಕ್ಕ !