ಸುಬ್ರಮಣ್ಯ ಬಳಿ ಭೀಕರ ಕಾರು ಅಪಘಾತ : ಸ್ಥಳದಲ್ಲೇ ನಾಲ್ವರ ದುರಂತ ಸಾವು

Team Newsnap
0 Min Read

ದಕ್ಷಿಣ ಕನ್ನಡ: ಭೀಕರ ಕಾರು ಅಪಘಾತ ಸಂಭವಿಸಿ ಸ್ಥಳದಲ್ಲೇ ಹಾಸನ ಮೂಲದ ನಾಲ್ವರು ದುರಂತ ಸಾವು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯ ಬಳಿ ನಡೆದಿದೆ.

ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ತೂಫಾನ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದು ಮಗು, ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದನ್ನು ಓದಿ –ಧಾರವಾಡಕ್ಕೆ ಪ್ರವೇಶ : ವಿನಯ್ ಕುಲ್ಕರ್ಣಿಗೆ ನಿರ್ಬಂಧ ಮುಂದುವರಿಕೆ – ಶಿಗ್ಗಾಂವ್ ನಿಂದ ಸ್ಪರ್ಧೆ ?

Share This Article
Leave a comment