Main News

ಅಕ್ಷರ್ ಆರ್ಭಟಕ್ಕೆ ಬೆದರಿದ ಕೆರಿಬಿಯನ್ನರು-ಸರಣಿ ಗೆದ್ದು ಟೀಂ ಇಂಡಿಯಾ ವಿಶ್ವದಾಖಲೆ

ಆಲ್​​ರೌಂಡರ್​​​ ಅಕ್ಷರ್​​​ ಪಟೇಲ್​ ಆರ್ಭಟಕ್ಕೆ ಕಕ್ಕಾಬಿಕ್ಕಿಯಾದ ವೆಸ್ಟ್​ ಇಂಡೀಸ್​, 2ನೇ ಏಕದಿನ ಪಂದ್ಯದಲ್ಲೂ ಸೋಲನುಭವಿಸಿತು. ಕ್ವೀನ್ಸ್​​​ ಪಾರ್ಕ್​ ಓವಲ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 2 ವಿಕೆಟ್​ಗಳ ದಾಖಲೆಯ ಜಯ ದಾಖಲಿದ ಧವನ್​ ಪಡೆ, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ.

ಭಾರತಕ್ಕೆ ಎರಡು ವಿಕೆಟ್​​ಗಳ ರೋಚಕ ಗೆಲುವು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದ ಭಾರತ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ವಿಂಡೀಸ್ ತಂಡಕ್ಕೆ ಆಘಾತದ ನಡುವೆಯೂ ಮೊತ್ತ ಹೆಚ್ಚಿಸಲು ನೆರವಾದ ಪೂರನ್​​​, ಅರ್ಧಶತಕ ಸಿಡಿಸ್ತಿದ್ದಂತೆ ಔಟಾದ್ರೆ, ಇತ್ತ ದಾಖಲೆಯ ಸೆಂಚುರಿ ಸಿಡಿಸಿದ ಬಳಿಕ ಹೋಪ್​​ ಕೂಡ ಹೋಪ್​​​ ಕಳ್ಕೊಂಡ್ರು. ರಾವ್​​​ಮನ್​ ಪೊವೆಲ್​ ಕೂಡ ಇವರ ಬೆನ್ನ ಹಿಂದೆಯೇ ವಾಪಾಸ್​ ಆದರು. 

ಶಾಯ್​​ ಹೋಪ್​​​​ – ಪೂರನ್​ ಅದ್ಭುತ ಆಟದ ನೆರವಿನಿಂದ ವಿಂಡೀಸ್​​​, 50 ಓವರ್​​​​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 311 ರನ್​​ಗಳ ಕಠಿಣ ಗುರಿ ನೀಡಿತು.ಭಾರತದ ಪರ ಶಾರ್ದೂಲ್​ 3 ವಿಕೆಟ್​, ಹೂಡಾ, ಚಹಲ್​, ಅಕ್ಷರ್​​​ ತಲಾ 1 ವಿಕೆಟ್​ ಪಡೆದರು.

ಈ ಕಠಿಣ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ, ಉತ್ತಮ ಆರಂಭವನ್ನೇ ಪಡೆಯಿತು ಆರಂಭಿಕ ಶಿಖರ್​​ ಧವನ್​ ನಿಧಾನವಾಗಿ ಇನ್ನಿಂಗ್ಸ್​​ ಕಟ್ಟಿದರು, ಶುಭ್​​ಮನ್​ ಗಿಲ್​​​​​​​ ವೇಗವಾಗಿ ಬ್ಯಾಟ್​​ ಬೀಸಿದ್ರು. ಆದರೆ ಮೊದಲ ಪಂದ್ಯದಲ್ಲಿ ಮಿಂಚಿದ್ದ ಗಬ್ಬರ್​​, 2ನೇ ಮ್ಯಾಚ್​​​​​​​​​ನಲ್ಲಿ 13 ರನ್​​​ಗೆ​​ ವಿಕೆಟ್​ ಒಪ್ಪಿಸಿದ್ರು. ಈ ಬೆನ್ನಲ್ಲೇ ಅರ್ಧಶತಕದ ಅಂಚಿನಲ್ಲಿದ್ದ ಗಿಲ್​​ ಕೂಡ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಇನ್ನು ಸೂರ್ಯ ಕುಮಾರ್​​​​ ಯಾದವ್​ ಮತ್ತೆ ನಿರಾಸೆ ಮೂಡಿಸಿದರು.

ಅಪಾಯದಲ್ಲಿದ್ದ ಟೀಮ್​ ಇಂಡಿಯಾಗೆ ನೆರವಾಗಿದ್ದು, ಶ್ರೇಯಸ್​​ ಅಯ್ಯರ್​​-ಸಂಜು ಸ್ಯಾಮ್ಸನ್​ರ ಅದ್ಭುತ ಜೊತೆಯಾಟ. ಎಚ್ಚರಿಕೆಯ ಆಟವಾಡಿದ ಈ ಜೋಡಿ 4ನೇ ವಿಕೆಟ್​​​ಗೆ​​ 99 ರನ್​ ಸೇರಿಸಿ , ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. 2ನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ ಅಯ್ಯರ್​, ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಾಗ 63 ರನ್​ಗಳಿಸಿದ್ದಾಗ LBW ಬಲಿಯಾದರು.

ಅಯ್ಯರ್​​​​ ಔಟಾದ ಬಳಿಕ ಹೋರಾಟ ಮುಂದುವರೆಸಿದ ಸ್ಯಾಮ್ಸನ್​, ಏಕದಿನದಲ್ಲಿ ತಮ್ಮ ಮೊದಲ ಅರ್ಧಶತಕ ಸಿಡಿಸಿದರು ಆದ್ರೆ ಅರ್ಧಶತಕದ ಬೆನ್ನಲ್ಲೇ ರನೌಟ್​ ಆದರು ಸೋಲಿನ ದವಡೆಗೆ ಸಿಲುಕಿದ್ದ ತಂಡವನ್ನು ದೀಪಕ್​ ಹೂಡಾ – ಅಕ್ಷರ್​ ಪಟೇಲ್​​ ಅರ್ಧಶತಕದ ಜೊತೆಯಾಟ ಕೂಡ ಆಡಿದರು. ಅಕ್ಷರ್​​​ ಪಟೇಲ್​​​ ಸಿಕ್ಸರ್​​​ಗಳ ಸುರಿಮಳೆಗೈದು 27 ಎಸೆತಗಳಲ್ಲೇ ತಮ್ಮ ಮೊದಲ ಏಕದಿನ ಅರ್ಧಶತಕ ಸಿಡಿಸಿದರು.ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ್ದು ನಟ ಅಕ್ಷಯ್ ಕುಮಾರ್ : ತೆರಿಗೆ ಇಲಾಖೆ ಪ್ರಶಂಸನಾ ಪತ್ರ

ಕೊನೆಯಲ್ಲಿ ಆವೇಶ್​ ಖಾನ್​, ಅಕ್ಷರ್​​​ಗೆ ಸಾಥ್​ ನೀಡಿ ಔಟಾದ್ರು. ಕೊನೇ ಓವರ್​​​ನಲ್ಲಿ 3 ಎಸೆತಗಳಲ್ಲಿ 6 ರನ್​ ಅಗತ್ಯ ಇದ್ದಾಗ ವಿನ್ನಿಂಗ್​​​ ಸಿಕ್ಸ್​ ಸಿಡಿಸಿದ ಅಕ್ಷರ್​​, ಭಾರತಕ್ಕೆ ರೋಚಕ ಜಯ ತಂದರು.

Team Newsnap
Leave a Comment
Share
Published by
Team Newsnap

Recent Posts

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024