ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಭಾನುವಾರವೂ ಶಾಲೆಗಳನ್ನು ನಡೆಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಚಿಂತನೆ ನಡೆಸಿದೆ.
ಈ ವಿಷಯ ವನ್ನು ಸುದ್ದಿಗಾರರಿಗೆ ತಿಳಿಸಿದ ಶಿಕ್ಷಣ ಸಚಿವ ನಾಗೇಶ್ ಪಠ್ಯಕ್ರಮ ಕಡಿತ ಮಾಡುವ ಆಲೋಚನೆ ಇಲ್ಲವೆಂದು ಸ್ಷಪ್ಟವಾಗಿ ನಾಗೇಶ್ ಹೇಳಿ ಶನಿವಾರ ಹಾಗೂ ಭಾನುವಾರ ತರಗತಿ ನಡೆಸಲು ಆಲೋಚನೆ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆಯಲಾಗುವುದು.
1ರಿಂದ 5 ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಸಂಬಂಧ ಮಂಗಳವಾರ (ಅ 19)ಮುಖ್ಯ ಮಂತ್ರಿ ಗಳು ಕರೆದಿರುವ. ಸಭೆಯಲ್ಲಿ ಅಂತಿಮ ಗೊಳಿಸಲಾಗುವುದು. 3ರಿಂದ 5ನೇ ತರಗತಿಯನ್ನು ಮೊದಲು ಆರಂಭಿಸಿ ನಂತರ 10 ದಿನ ಕಳೆದ ಮೇಲೆ 1 ಮತ್ತು 2 ನೇ ತರಗತಿ ಆರಂಭಿಸುವ ಚಿಂತನೆ ನಡೆದಿದೆ ಎಂದರು.