ಪ್ರೀತಿಸಿ ಮೋಸ ಮಾಡಿದ ಯುವಕನನ್ನು ಗಲ್ಲಿಗೇರಿಸಿ – ಆತ್ಮಹತ್ಯೆಗೆ ಶರಣಾದ ಯುವತಿ ಡೆತ್ ನೋಟ್ ಲಭ್ಯ

Team Newsnap
1 Min Read

ಪ್ರೀತಿಸಿ ಮೋಸ ಮಾಡಿದ ಯುವಕನನ್ನು ಗಲ್ಲಿಗೇರಿಸಿ ಎಂದು ಡೆತ್ ನೋಟ್ ಬರೆದು ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.

ನಂಜನಗೂಡುತಾಲೂಕಿನ ಚೆನ್ನಪಟ್ಟಣ ಗ್ರಾಮದಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ 5 ವರ್ಷಗಳ ಕಾಲ ನನ್ನನ್ನು ಪ್ರೀತಿಸಿ ಎಲ್ಲ ರೀತಿಯಲ್ಲೂ ಬಳಸಿಕೊಂಡು ನಂತರ ಮೋಸ ಮಾಡಿದ ಗ್ರಾಮದ ಲೋಕೇಶನನ್ನು ಗಲ್ಲೆಗೇರಿಸಬೇಕು ಎಂದು ಆಗ್ರಹಿಸಿ ಡೆತ್ ನೋಟ್ ಬರೆದಿಟ್ಟಿದ್ದಾಳೆ

ಮನೆಯಲ್ಲಿ ದೊರೆತ ಡೆತ್ ನೋಟ್ ನಲ್ಲಿ‌ ಯುವತಿಯ ತಾತ ಚೆನ್ನ ಪಟ್ಟಣನ ಕರಿಯ್ಯಯ್ಯ, ಹುಲ್ಲಹಳ್ಳಿ ಠಾಣೆಗೆ ದೂರು ನೀಡಿದ್ದಾರೆ

ಶೋಭಾ ಅದೇ ಗ್ರಾಮದ ಲೋಕೇಶ್ ಎಂಬಾತನನ್ನ ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದು ಈಗ ಆತ ದೂರವಾಗಿರುವ ಕಾರಣ ತಾನು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಯುವತಿ ಬರೆದಿದ್ದಾಳೆ

ಹುಲ್ಲಹಳ್ಳಿ ಪೊಲೀಸರು ಈಗ ಶೋಭಾಳ ಸಾವು ,ಆಕೆಯ ಶವವನ್ನು ದಹಿಸಿದ ರೀತಿ ಮತ್ತು ಆಕೆಯ ಡೆತ್ ನೊಟ್ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment