ಮಂಡ್ಯದ ಶಿಲ್ಪಿ ನಿತ್ಯ ಸಚಿವ ಕೆ ವಿ ಶಂಕರೇಗೌಡರ ಪತ್ನಿ ಸುಶೀಲಮ್ಮ (88) ಕಳೆದ ಮಧ್ಯರಾತ್ರಿ ನಂತರ ನಿಧನರಾದರು.
ಕೆ ವಿ ಶಂಕರೇಗೌಡರ ಜೊತೆ ಸುಧೀರ್ಘ ಸಹ ಬಾಳ್ವೆ ನಡೆಸಿ ಮಂಡ್ಯದ ಜನರಯೊಂದಿಗೆ ಅತೀವ ಪ್ರೀತಿ ಹೊಂದಿದ್ದ ಸುಶೀಲಮ್ಮನವರಿಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಜೊತೆಗೆ ಮೊಮ್ಮಕ್ಕಳಾದ ಪಿಇಟಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ , ಚೈತ್ರ ಬ್ರೊಚೇರಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಹೊನ್ನನಾಯಕನಹಳ್ಳಿ ಸಿಂಗ್ರೀಗೌಡರ ಪುತ್ರಿ ಸುಶೀಲಮ್ಮ ಅತ್ಯಂತ ಸರಳ ಸಜ್ಜನ ಸ್ವಭಾವ. ಶಂಕರಗೌಡರ ಎಲ್ಲಾ ಜನಪರ ಕೆಲಸಗಳಿಗೆ ಸಾಥ್ ನೀಡಿದವರು. ಹೃದಯವಂತರಾಗಿದ್ದರು.
ಸುಶೀಲಮ್ಮನವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಮಂಡ್ಯದ ಬಂದೀಗೌಡ ಬಡಾವಣೆಯ ಮೊದಲ ಕ್ರಾಸ್ ನಲ್ಲಿರುವ ನಿವಾಸದಲ್ಲಿ ಇಡಲಾಗಿದೆ. ಸುಮಾರು ಮಧ್ಯಾಹ್ನ 2.30 ರ ವೇಳೆಗೆ ಕೀಲಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು