ಗಡಿ ತಂಟೆ ಇಲ್ಲಿಗೆ ಬಿಡಿ : ಸುಪ್ರೀಂ ಆದೇಶವೇ ‌ ಅಂತಿಮ – ಶಾ

Team Newsnap
1 Min Read
  • ಉಭಯ ರಾಜ್ಯಗಳ ಸಿಎಂಗಳಿಗೆ ಅಮಿತ್‌ ಶಾ ಸೂಚನೆ
  • ಕೇಂದ್ರ ಸಚಿವರ ಆದೇಶಕ್ಕೆ ತಲೆ ಬಾಗಿದ ಉಭಯ ರಾಜ್ಯಗಳ ಸಿಎಂ

ಸುಪ್ರೀಂಕೋರ್ಟ್‌ ಅಂತಿಮ ಆದೇಶ ಹೊರ ಬರುವ ತನಕ ಕಾಯಿರಿ. ಉಭಯ ರಾಜ್ಯಗಳ ನಾಯಕರು
ಗಡಿ ತಂಟೆಗೆ ಹೋಗಬೇಡಿ ಇಬ್ಬರು ಸುಮ್ನೆ ಇರಿ ಅಂತ ಅಮಿತ್‌ ಶಾ ಅವರು ಸೂಚನೆ ನೀಡಿದ್ದಾರೆ.

ಬುಧವಾರ ರಾತ್ರಿ ಮಹಾರಾಷ್ಟ್ರ – ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ನಡೆದ ಮಹಾ ಸಿಎಂ ಮತ್ತು ಕರ್ನಾಟಕ ಸಿಎಂಗಳ ನಡುವೆ ನಡೆದ ಸಭೆಯಲ್ಲಿ ಉಭಯ ನಾಯಕರುಗಳಿಂದ ಮಾಹಿತಿಯನ್ನು ಪಡೆದುಕೊಂಡು ಬಳಿಕ ಸದ್ಯಕ್ಕೆ ಯಾವುದೇ ರೀತಿಯಕಲ್ಲಿ ಉದ್ವಿಗ್ವ ಪರಿಸ್ಥಿತಿಯನ್ನು ಆಗದೇ ನೋಡಿಕೊಳ್ಳುವ ಜವಾವ್ದಾರಿ ಇದೆ, ಈ ನಿಟ್ಟಿನಲ್ಲಿ ಇಬ್ಬರು ಕೂಡ ಸುಪ್ರೀಂಕೋರ್ಟ್‌ ನಿಂದ ಬರೋ ಅಂತಿಮ ತೀರ್ಪಿನ ತನಕ ತಮ್ಮ ತಮ್ಮ ಜವ್ದಾರಿಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಕಬ್ಬು ತೂಕದಲ್ಲಿ ಮೋಸ : ರಾಜ್ಯದ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ

ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಸಮಸ್ಯೆಗಳನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದು, ರಸ್ತೆಯಲ್ಲಿ ಅಲ್ಲ ಅಂತ ಹೇಳಿದರು.

Share This Article
Leave a comment