ಅಭಿವೃದ್ದಿಗಾಗಿ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ-ಸಂಸದೆ ಸುಮಲತಾ

Team Newsnap
2 Min Read
Sumalatha: make use of development money for good cause ಅಭಿವೃದ್ದಿಗಾಗಿ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ-ಸಂಸದೆ ಸುಮಲತಾ #thenewsnap #latestnews #kanataka #NEWS #kannada #sumalatha #mandya #mysuru

ಜಿಲ್ಲೆಯ ಅಭಿವೃದ್ದಿಗಾಗಿ ಬರುವಂತಹ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರಮವಹಿಸಿ ಕಾರ್ಯ ನಿರ್ವಹಿಸಿ ಎಂದು ಸಂಸದೆ ಸುಮಲತಾ ಅಂಬರೀಷ್ ಸೂಚಿಸಿದರು

ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ವಲಯ/ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇದನ್ನು ಓದಿ –ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದ ಯುವಕನ ತಲೆಯೇ ಕಟ್

ಜಿಲ್ಲೆಯಲ್ಲಿ ಅನೇಕ ಶಾಲೆಗಳು ಶಿಥಿಲವಾಗಿದ್ದು, ಅವುಗಳನ್ನು ದುರಸ್ತಿಪಡಿಸುವ ಕೆಲಸಗಳು ಬೇಗನೇ ನಡೆಯಬೇಕು. ಶಾಲೆ ಮಕ್ಕಳಿಗೆ ಯಾವುದೇ ತೊಂದರೆಯಾಗದ ರೀತಿ ಮೂಲ ಸೌಕರ್ಯವನ್ನು ಕಲ್ಪಿಸಿಕೊಡಿ ನರೇಗಾ ಯೋಜನೆಯಡಿ ಶಾಲೆಗಳ ಕಟ್ಟಡಗಳನ್ನು ಸರಿಪಡಿಸಿ ಎಂದು ಹೇಳಿದರು.

ಬಸರಾಳು ಶಾಲೆ ಸೇರಿ ಅನೇಕ ಶಾಲೆಯಲ್ಲಿ 1ನೇತರಗತಿಯಿಂದ 7ನೇ ತರಗತಿ ವರೆಗೆ ಒಬ್ಬರೇ ಶಿಕ್ಷಕರು ಎಲ್ಲಾ ವಿಷಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸಿ ಶಿಕ್ಷಕರನ್ನು ನಿಯೋಜಿಸುವಂತೆ ತಿಳಿಸಿದರು.

ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಗಳಲ್ಲಿ ನಡೆಯುತ್ತಿಲ್ಲ. ಕೇವಲ ಸಭೆಯ ನಡಾವಳಿಗಳನ್ನು ಓದಿ ಅನುಮೋದನೆ ಪಡೆಯಲಾಗುತ್ತಿದೆ. ಗ್ರಾಮ ಸಭೆ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿವೇಶನವನ್ನು ನೀಡಲು ಕ್ರಮವಹಿಸಿ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಅವರು ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಮಾತನಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ 2021- 22ನೇ ಸಾಲಿನ ರಾಜಸ್ವ 6 ಸಾವಿರ ಲಕ್ಷ ರೂ ಗುರಿ ಹೊಂದಿದ್ದು,ಇದರಲ್ಲಿ ಸಂಗ್ರಹಿಸಿದ ರಾಜಧನ 5455.53 ಲಕ್ಷ ರೂ ಇದ್ದು,ಶೇ.91 ಇದೆ ಎಂದರು.

ಜಿಲ್ಲಾದ್ಯಂತ ಅನಧಿಕೃತ ಗಣಿಗಾರಿಕೆ, ಅನಧಿಕೃತ ಕ್ರಷರ್ ಚಟುವಟಿಕೆ , ಬ್ಲಾಸ್ಟಿಂಗ್ ಗೆ ಸಂಬಂಧಿಸಿದ ದಾಖಲೆಯ ಒಟ್ಟು ಪ್ರಕರಣದಲ್ಲಿ ಮದ್ದೂರು 16, ನಾಗಮಂಗಲ11,ಪಾಂಡವಪುರ 10, ಶ್ರೀರಂಗಪಟ್ಟಣ26, ಮಂಡ್ಯ 03, ಕೆ.ಆರ್.ಪೇಟೆ 15 ಮಳವಳ್ಳಿ ಯಾವುದೇ ಪ್ರಕರಣಗಳಿಲ್ಲ ಒಟ್ಟು ಜಿಲ್ಲೆಯಲ್ಲಿ 81 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅನಧಿಕೃತ ಗಣಿಗಾರಿಕೆ/ ಸಾಗಾಣಿಕೆ ಸಂಬಂಧ 81 ಪ್ರಕರಣಗಳನ್ನು ಪತ್ತೆ ಮಾಡಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗಿದ್ದು,ಹಾಗೂ ಉಪ ಖನಿಜಗಳ ಅನಧಿಕೃತ ಸಾಗಾಣಿಕೆಯಲ್ಲಿ ತೊಡಗಿದ್ದ 243 ವಾಹನಗಳನ್ನು ಪತ್ತೆಮಾಡಿ 76,05,924ರೂ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದರು.

ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ನಿರ್ಣಯದಂತೆ ಖನಿಜಗಳ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ಜಿಲ್ಲೆಯಲ್ಲಿ 10 ಖನಿಜ ತನಿಖಾ ಠಾಣೆಗಳನ್ನು ನಿಯೋಜಿಸಲಾಗಿದೆ ಎಂದರು.ಮುಖೇಶ್​ ಅಂಬಾನಿ ರಿಲಯನ್ಸ್‌ ಜಿಯೋ ನಿರ್ದೇಶಕ ಹುದ್ದೆಗೆ ರಾಜೀನಾಮೆ – ನೂತನ ಸಾರಥಿ ನೇಮಕ

ನರೇಗಾ ಯೋಜನೆಯಡಿ ಕೆರಗೋಡು ಗ್ರಾಮದಲ್ಲಿನ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ, ಕ್ರಿಯಾ ಯೋಜನೆಯಲ್ಲಿ ಸೇರಿಸಿ ಊಳು ತೆಗೆಯುವ ಕಾಮಗಾರಿ ಕುರಿತು ಮಾಹಿತಿ ಕಲೆಹಾಕಿ ಸಲಹೆ ನೀಡಿದರು.

ಸಭೆಯಲ್ಲಿ ವಿಧಾನ ಸಭೆಯ ಶಾಸಕರಾದ ಎಂ.ಶ್ರೀನಿವಾಸ್, , ಜಿಲ್ಲಾಧಿಕಾರಿ ಎಸ್.ಅಶ್ವತಿ,ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಜೆ ದಿವ್ಯಪ್ರಭು,ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣು ಗೋಪಾಲ್. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಋತ್ರೇನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment