Mandya

ಮಂಡ್ಯದ ದಿಶಾ ಸಭೆಯಲ್ಲೂ ಸುಮಲತಾ – ಜೆಡಿಎಸ್ ಶಾಸಕರ ನಡುವೆ ವಾಕ್ ಸಮರ

ಮಂಡ್ಯ ರಾಜಕಾರಣ ತಾರಕಕ್ಕೆ ಏರಿದೆ. ಜಿಲ್ಲೆಯ ದಳಪತಿ ಹಾಗೂ ಸಂಸದೆ ಸುಮಲತಾ ಸಮರ ನಡೆಯುತ್ತಲೇ ಇರುತ್ತೆ. ನಿನ್ನೆ ರಾತ್ರಿ ತನಕ ನಡೆದ ದಿಶಾ ಸಭೆಯಲ್ಲಿ ಇಂತಹ ಸಮರಕ್ಕೆ ಸಾಕ್ಷಿಯಾಯಿತು.

ಕೇವಲ ಚುನಾವಣೆ ಸಂದರ್ಭದಲ್ಲಷ್ಟೇ ಅಲ್ಲ ಸರ್ಕಾರಿ ಸಭೆಗಳಲ್ಲೂ ಆ ವಾಕ್ಸಮರ ಇದ್ದೇ ಇರುತ್ತೆ ,ಸಭೆಗೆ 2 ಗಂಟೆ ತಡವಾಗಿ ಬಂದ ಸಂಸದೆ ಸುಮಲತಾ ವಿರುದ್ಧ ದಳ ಶಾಸಕರು ಆಕ್ರೋಶ ಹೊರ ಹಾಕಿದರು. ಅದೇ ಸಿಟ್ಟನ್ನು ಅಧಿಕಾರಿಗಳ ಮೇಲೆ ತೋರಿದರು.

ಜೆಡಿಎಸ್​​​ ಶಾಸಕರು ಹಾಗೂ ಸಂಸದೆ ಸುಮಲತಾ ನಡುವೆ ಸಮರ ಸಾಮಾನ್ಯ. ಅವಕಾಶ ಸಿಕ್ಕಲ್ಲೆಲ್ಲಾ ಹೊತ್ತಿ ಉರಿಯುತ್ತಿದೆ. ಇದಕ್ಕೆ ನಿನ್ನೆ ಮಂಡ್ಯ ಜಿ.ಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆ ಹೊರತಾಗಿರಲಿಲ್ಲ.

ಮಧ್ಯಾಹ್ನ 2 ಗಂಟೆಗೆ ಸಂಸದೆ ಸುಮಲತಾ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ಸುಮಲತಾ 4 ಗಂಟೆಗೆ ಆಗಮಿಸಿದರು.

ಇದು ಜೆಡಿಎಸ್ ಶಾಸಕರನ್ನು ಕೆರಳುವಂತೆ ಮಾಡಿತು.ಕಾದು ಕಾದು ಸುಸ್ತಾದ ದಳ ಶಾಸಕರು ಸುಮಲತಾ ಮೇಲಿನ ಸಿಟ್ಟನ್ನು ಹೊರಹಾಕಿ. ಸುಮಲತಾ ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು

ಈ ವೇಳೆ ಸುಮಲತಾ ಬೆಂಬಲಕ್ಕೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಬೇಲೂರು ಸೋಮಶೇಖರ್ ಮಧ್ಯ ಪ್ರವೇಶಿಸಿದ್ದು ಸಭೆಯಲ್ಲಿ ಮತ್ತಷ್ಟು ಗದ್ದಲ, ಕೋಲಾಹಲಕ್ಕೆ ನೆಪವಾಯಿತು.

ಈ ಗದ್ದಲದ ನಡುವೆ ಆರಂಭವಾದ ಸಭೆಯಲ್ಲಿ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ರಸ್ತೆಯಲ್ಲಿನ ಗುಂಡಿ ಮುಚ್ಚಿ, ಇಲ್ಲದಿದ್ದರೆ ಮರಕ್ಕೆ ಕಟ್ಟಿಸ್ತೀನಿ ಅಂತ ಸಂಸದೆ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಮಾಮೂಲಿಯಂತೆ ಗಣಿಗಾರಿಕೆ ವಿಚಾರ ಚಚೆ೯ಗೆ ಬಂತು . ಗಣಿಗಾರಿಕೆ, ಕ್ರಷರ್ ನಡೆಸಲು ಅಧಿಕಾರಿಗಳು ಬಿಡುತ್ತಿಲ್ಲ ಕಟ್ಟಡ, ಅಭಿವೃದ್ದಿ ಕೆಲಸಗಳಿಗೆ ಮೆಟಿರಿಯಲ್ ಸಿಕ್ತಿಲ್ಲ ಎಂದು ಶಾಸಕ ಸುರೇಶ್ ಗೌಡ ಗಣಿ ಇಲಾಖೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡಿಯಿತು.

Team Newsnap
Leave a Comment
Share
Published by
Team Newsnap

Recent Posts

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024