ಮಂಡ್ಯ ರಾಜಕಾರಣ ತಾರಕಕ್ಕೆ ಏರಿದೆ. ಜಿಲ್ಲೆಯ ದಳಪತಿ ಹಾಗೂ ಸಂಸದೆ ಸುಮಲತಾ ಸಮರ ನಡೆಯುತ್ತಲೇ ಇರುತ್ತೆ. ನಿನ್ನೆ ರಾತ್ರಿ ತನಕ ನಡೆದ ದಿಶಾ ಸಭೆಯಲ್ಲಿ ಇಂತಹ ಸಮರಕ್ಕೆ ಸಾಕ್ಷಿಯಾಯಿತು.
ಕೇವಲ ಚುನಾವಣೆ ಸಂದರ್ಭದಲ್ಲಷ್ಟೇ ಅಲ್ಲ ಸರ್ಕಾರಿ ಸಭೆಗಳಲ್ಲೂ ಆ ವಾಕ್ಸಮರ ಇದ್ದೇ ಇರುತ್ತೆ ,ಸಭೆಗೆ 2 ಗಂಟೆ ತಡವಾಗಿ ಬಂದ ಸಂಸದೆ ಸುಮಲತಾ ವಿರುದ್ಧ ದಳ ಶಾಸಕರು ಆಕ್ರೋಶ ಹೊರ ಹಾಕಿದರು. ಅದೇ ಸಿಟ್ಟನ್ನು ಅಧಿಕಾರಿಗಳ ಮೇಲೆ ತೋರಿದರು.
ಜೆಡಿಎಸ್ ಶಾಸಕರು ಹಾಗೂ ಸಂಸದೆ ಸುಮಲತಾ ನಡುವೆ ಸಮರ ಸಾಮಾನ್ಯ. ಅವಕಾಶ ಸಿಕ್ಕಲ್ಲೆಲ್ಲಾ ಹೊತ್ತಿ ಉರಿಯುತ್ತಿದೆ. ಇದಕ್ಕೆ ನಿನ್ನೆ ಮಂಡ್ಯ ಜಿ.ಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆ ಹೊರತಾಗಿರಲಿಲ್ಲ.
ಮಧ್ಯಾಹ್ನ 2 ಗಂಟೆಗೆ ಸಂಸದೆ ಸುಮಲತಾ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ಸುಮಲತಾ 4 ಗಂಟೆಗೆ ಆಗಮಿಸಿದರು.
ಇದು ಜೆಡಿಎಸ್ ಶಾಸಕರನ್ನು ಕೆರಳುವಂತೆ ಮಾಡಿತು.ಕಾದು ಕಾದು ಸುಸ್ತಾದ ದಳ ಶಾಸಕರು ಸುಮಲತಾ ಮೇಲಿನ ಸಿಟ್ಟನ್ನು ಹೊರಹಾಕಿ. ಸುಮಲತಾ ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು
ಈ ವೇಳೆ ಸುಮಲತಾ ಬೆಂಬಲಕ್ಕೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಬೇಲೂರು ಸೋಮಶೇಖರ್ ಮಧ್ಯ ಪ್ರವೇಶಿಸಿದ್ದು ಸಭೆಯಲ್ಲಿ ಮತ್ತಷ್ಟು ಗದ್ದಲ, ಕೋಲಾಹಲಕ್ಕೆ ನೆಪವಾಯಿತು.
ಈ ಗದ್ದಲದ ನಡುವೆ ಆರಂಭವಾದ ಸಭೆಯಲ್ಲಿ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ರಸ್ತೆಯಲ್ಲಿನ ಗುಂಡಿ ಮುಚ್ಚಿ, ಇಲ್ಲದಿದ್ದರೆ ಮರಕ್ಕೆ ಕಟ್ಟಿಸ್ತೀನಿ ಅಂತ ಸಂಸದೆ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಮಾಮೂಲಿಯಂತೆ ಗಣಿಗಾರಿಕೆ ವಿಚಾರ ಚಚೆ೯ಗೆ ಬಂತು . ಗಣಿಗಾರಿಕೆ, ಕ್ರಷರ್ ನಡೆಸಲು ಅಧಿಕಾರಿಗಳು ಬಿಡುತ್ತಿಲ್ಲ ಕಟ್ಟಡ, ಅಭಿವೃದ್ದಿ ಕೆಲಸಗಳಿಗೆ ಮೆಟಿರಿಯಲ್ ಸಿಕ್ತಿಲ್ಲ ಎಂದು ಶಾಸಕ ಸುರೇಶ್ ಗೌಡ ಗಣಿ ಇಲಾಖೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡಿಯಿತು.
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!