ಮಂಡ್ಯ ರಾಜಕಾರಣ ತಾರಕಕ್ಕೆ ಏರಿದೆ. ಜಿಲ್ಲೆಯ ದಳಪತಿ ಹಾಗೂ ಸಂಸದೆ ಸುಮಲತಾ ಸಮರ ನಡೆಯುತ್ತಲೇ ಇರುತ್ತೆ. ನಿನ್ನೆ ರಾತ್ರಿ ತನಕ ನಡೆದ ದಿಶಾ ಸಭೆಯಲ್ಲಿ ಇಂತಹ ಸಮರಕ್ಕೆ ಸಾಕ್ಷಿಯಾಯಿತು.
ಕೇವಲ ಚುನಾವಣೆ ಸಂದರ್ಭದಲ್ಲಷ್ಟೇ ಅಲ್ಲ ಸರ್ಕಾರಿ ಸಭೆಗಳಲ್ಲೂ ಆ ವಾಕ್ಸಮರ ಇದ್ದೇ ಇರುತ್ತೆ ,ಸಭೆಗೆ 2 ಗಂಟೆ ತಡವಾಗಿ ಬಂದ ಸಂಸದೆ ಸುಮಲತಾ ವಿರುದ್ಧ ದಳ ಶಾಸಕರು ಆಕ್ರೋಶ ಹೊರ ಹಾಕಿದರು. ಅದೇ ಸಿಟ್ಟನ್ನು ಅಧಿಕಾರಿಗಳ ಮೇಲೆ ತೋರಿದರು.
ಜೆಡಿಎಸ್ ಶಾಸಕರು ಹಾಗೂ ಸಂಸದೆ ಸುಮಲತಾ ನಡುವೆ ಸಮರ ಸಾಮಾನ್ಯ. ಅವಕಾಶ ಸಿಕ್ಕಲ್ಲೆಲ್ಲಾ ಹೊತ್ತಿ ಉರಿಯುತ್ತಿದೆ. ಇದಕ್ಕೆ ನಿನ್ನೆ ಮಂಡ್ಯ ಜಿ.ಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆ ಹೊರತಾಗಿರಲಿಲ್ಲ.
ಮಧ್ಯಾಹ್ನ 2 ಗಂಟೆಗೆ ಸಂಸದೆ ಸುಮಲತಾ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ಸುಮಲತಾ 4 ಗಂಟೆಗೆ ಆಗಮಿಸಿದರು.
ಇದು ಜೆಡಿಎಸ್ ಶಾಸಕರನ್ನು ಕೆರಳುವಂತೆ ಮಾಡಿತು.ಕಾದು ಕಾದು ಸುಸ್ತಾದ ದಳ ಶಾಸಕರು ಸುಮಲತಾ ಮೇಲಿನ ಸಿಟ್ಟನ್ನು ಹೊರಹಾಕಿ. ಸುಮಲತಾ ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು
ಈ ವೇಳೆ ಸುಮಲತಾ ಬೆಂಬಲಕ್ಕೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಬೇಲೂರು ಸೋಮಶೇಖರ್ ಮಧ್ಯ ಪ್ರವೇಶಿಸಿದ್ದು ಸಭೆಯಲ್ಲಿ ಮತ್ತಷ್ಟು ಗದ್ದಲ, ಕೋಲಾಹಲಕ್ಕೆ ನೆಪವಾಯಿತು.
ಈ ಗದ್ದಲದ ನಡುವೆ ಆರಂಭವಾದ ಸಭೆಯಲ್ಲಿ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ರಸ್ತೆಯಲ್ಲಿನ ಗುಂಡಿ ಮುಚ್ಚಿ, ಇಲ್ಲದಿದ್ದರೆ ಮರಕ್ಕೆ ಕಟ್ಟಿಸ್ತೀನಿ ಅಂತ ಸಂಸದೆ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಮಾಮೂಲಿಯಂತೆ ಗಣಿಗಾರಿಕೆ ವಿಚಾರ ಚಚೆ೯ಗೆ ಬಂತು . ಗಣಿಗಾರಿಕೆ, ಕ್ರಷರ್ ನಡೆಸಲು ಅಧಿಕಾರಿಗಳು ಬಿಡುತ್ತಿಲ್ಲ ಕಟ್ಟಡ, ಅಭಿವೃದ್ದಿ ಕೆಲಸಗಳಿಗೆ ಮೆಟಿರಿಯಲ್ ಸಿಕ್ತಿಲ್ಲ ಎಂದು ಶಾಸಕ ಸುರೇಶ್ ಗೌಡ ಗಣಿ ಇಲಾಖೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡಿಯಿತು.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ