ಗುರುರಾಯರ ದರ್ಶನ ಪಡೆದ ಸುಧಾಮೂರ್ತಿ

Team Newsnap
0 Min Read

ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾ ಮೂರ್ತಿ ಮಂತ್ರಾಯಲಯಕ್ಕೆ ಭೇಟಿ ನೀಡಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.

suda 2


ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಸುಧಾ ಮೂರ್ತಿಗೆ ಫಲಪುಷ್ಪ ಮಂತ್ರಾಕ್ಷತೆ ನೀಡಿದರು. ಇದೇ ವೇಳೆ ಹೊಸದಾಗಿ ಆರಂಭಗೊಂಡಿರುವ ಹರಿದರ್ಶಿನಿ ಮ್ಯೂಸಿಯಂಗೆ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

sudamurthy 1


ನಾರಾಯಣಮೂರ್ತಿ ದಂಪತಿ ರಾಯರ ಪರಮಭಕ್ತರು. ಇತ್ತೀಚೆಗೆ ಮುಕ್ತಾಯಗೊಂಡ ರಾಯರ 350 ನೇ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಮಠಕ್ಕೆ ಒಂದು ಲಾರಿಯಷ್ಟು ದಿನಸಿ ಪದಾರ್ಥಗಳನ್ನು ಕಾಣಿಕೆಯಾಗಿ ಕಳುಹಿಸಿದ್ದರು.

Share This Article
Leave a comment