ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಚಂದಗಾಲು ಗ್ರಾಮದ ರೈತರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳು ದಾರುಣ ಸಾವು ಕಂಡಿದೆ.
ಚಂದಗಾಲು ಗ್ರಾಮದ ಶ್ರೀನಿವಾಸಯ್ಯ ರವರ ಮಗ ನಾರಾಯಣ ಎಂಬುವರ ಮನೆಯಲ್ಲಿ ಈ ಘಟನೆ ಜರುಗಿದೆ.
3ಹಸುಗಳು 2 ಟಗರುಗಳು ದಾರುಣ ಸಾವು ಕಂಡಿವೆ.
ತಡರಾತ್ರಿ ದನಕರುಗಳಿಗೆ ಮೇವು ಹಾಕಿದರೆ ಬೆಳಿಗ್ಗೆ ಹಾಲು ಕರೆಯಲು ಬಂದ ಸಂದರ್ಭದಲ್ಲಿ ಸಾವನ್ನಪ್ಪಿರುವ ಘಟನೆಯನ್ನು ನೋಡಿ ರೈತ ಗಾಬರಿಗೊಂಡರು. ದನ ಕರುಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.