ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಪರ್ಸಂಟೆಜ್ ಗಾಗಿ ಕಿರುಕುಳ ನೀಡುವ ಶ್ರೀರಂಗಪಟ್ಟಣ ಇಓ ಭೈರಪ್ಪನ ವಿರುದ್ದ ಸಕಾ೯ರಕ್ಕೆ ದೂರು ನೀಡಿರುವ ವರದಿ ಬೆಳಕಿಗೆ ಬಂದಿದೆ.
ಪ್ರತಿ. ಯೋಜನೆಯಲ್ಲಿ ತನಗೆ ಪರ್ಸಂಟೇಜ್ ನೀಡದಿದ್ದರ ತೊಂದರೆ ಕೊಟ್ಟು ಮೇಲಧಿಕಾರಿಗೆ ದೂರು ಕೊಡುವ ಎಚ್ಚರಿಕೆ ನೀಡುವ ಈ ಭೈರಪ್ಪ ಮಂಡ್ಯದಲೊಬ್ಬ ಪರ್ಸಂಟೆಜ್ ಅಧಿಕಾರಿ ಎಂದೇ ಫೇಮಸ್ ಎನ್ನುವ ಆರೋಪ ಪಿಡಿಓಗಳದ್ದು.
ಇಓ ಬೈರಪ್ಪ ಪರ್ಸೆಂಟೇಜ್ ಲೆಕ್ಕದಲ್ಲಿ ಲಂಚ ವಸೂಲಿ ಮಾಡುತ್ತಾರಂತೆ ಎಂದು ಬೈರಪ್ಪ ವಿರುದ್ಧ ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯ ಪಿಡಿಓಗಳಿಂದ ಗಂಭೀರ ಆರೋಪ ಮಾಡಿದ್ದಾರೆ.
ಕಾಮಗಾರಿ ಹಾಗೂ ಯೋಜನೆಗಳ ಬಿಲ್ ಮಂಜೂರು ಮಾಡಲು ಪರ್ಸಂಟೇಜ್ ಕೊಡಬೇಕು ಪರ್ಸಂಟೆಜ್ ನೀಡಲಿಲ್ಲ ಎಂದರೆ ಬಿಲ್ ಪಾಸ್ ಮಾಡಲ್ಲ ಎಂಬ ಬೆದರಿಕೆ ಬೇರೆ ಹಾಕ್ತಾರಂತೆ. ಶೇ.4ರಿಂದ ಶೇ.20ರಷ್ಟು ಪರ್ಸಂಟೆಜ್ಗೆ ಪೀಡಿಸುವ ಇಓ ಇ ಸ್ವತ್ತು ಮಾಡಿಸುವವರಿಂದ ಹಣ ಪಡೆದು ತನಗೂ ಕೊಡಿ ಎನ್ನುತಾನಂತೆ.
ಪಿಡಿಓಗಳು ಒಂದಿಷ್ಟು ಪ್ರಮಾಣದಲ್ಲಿ ಹಣ ನೀಡಿದರೂ ಭೈರಪ್ಪಗೆ ಮಾತ್ರ ಹಣದ ದಾಹ ನೀಗುವುದಿಲ್ಲ ಹೀಗಾಗಿಯೇ ಇಓ ಭೈರಪ್ಪ ಕಿರುಕುಳಕ್ಕೆ ಬೇಸತ್ತ ಪಿಡಿಓಗಳಿಂದ ಸಕಾ೯ರದ ಪಂಚಾಯತ್ ರಾಜ್ಯ ಇಲಾಖೆಯ ಪ್ರದಾನ ಕಾರ್ಯದರ್ಶಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ವಿಡಿಯೋ ವೈರಲ್ :
ಇಓ ಬೈರಪ್ಪ ಪರ್ಸಂಟೆಜ್ ಕೇಳುತ್ತಿರುವ ಆಡಿಯೋ , ವಿಡಿಯೋ ಈಗ ಮಂಡ್ಯದಲ್ಲಿ ವೈರಲ್ ಆಗಿದೆ.
ಕಿರುಕುಳ ತಾಳಲಾರದೇ ವಿಡಿಯೋ ಮತ್ತು ಆಡಿಯೋ ಮಾಡಿರುವ ಪಿಡಿಓಗಳು ಇಓ ಬೈರಪ್ಪ ಪರ್ಸಂಟೆಜ್ ಕೇಳುತ್ತಿರುವ ಆಡಿಯೋ ವಿಡಿಯೋ ವೈರಲ್ ಮಾಡಿದ್ದಾರೆ. ಸಿಇಓ ದಿವ್ಯ ಪ್ರಭು ಅವರು ತಕ್ಷಣವೇ ಭೈರಪ್ಪನ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ.
- ಲಖನೌ ತಂಡವನ್ನು14 ರನ್ ಗಳಿಂದ ಮಣಿಸಿದ RCB – ಫೈನಲ್ ಪಂದ್ಯಕ್ಕೆ ಇನ್ನೂ ಒಂದು ಗೆಲವು ಅಗತ್ಯ
- ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್ ಬಂಧನ: ಜೈಲು
- ಮಂಡ್ಯದಲ್ಲಿ ಮಳೆ ಹಾನಿ ನಷ್ಟಕ್ಕೆ 2 ದಿನದೊಳಗೆ ಪರಿಹಾರ ಕೊಡಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದೇಶ
- ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ
- ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ
More Stories
ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ
ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ
ಪದವೀಧರರ ಕ್ಷೇತ್ರದ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ನಾಮಪತ್ರ ಸಲ್ಲಿಕೆ