ಕಾಂಗ್ರೆಸ್ ಕಾರ್ಯಕರ್ತನ ಕಪಾಳಮೋಕ್ಷಕ್ಕೆ ಯತ್ನಿಸಿದ ಸಿದ್ದು

Team Newsnap
1 Min Read

ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಬೇಸರದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋಪದಲ್ಲಿ ಕಾಂಗ್ರೆಸ್​ ಕಾರ್ಯಕರ್ತರೊಬ್ಬರಿಗೆ ಇಂದು ಕಪಾಳಮೋಕ್ಷಕ್ಕೆ ಯತ್ನಿಸಿದ ಪ್ರಸಂಗ ಜರುಗಿತ.

ಹರಿಹರ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ರಾಮಪ್ಪ ಹಾಗೂ ರಾಣೆಬೆನ್ನೂರಿನ ಟಿಕೆಟ್​ ಆಕಾಂಕ್ಷಿ ಆರ್.ಶಂಕರ್ ಬೆಂಬಲಿಗರು ಇಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿದ್ದರಾಮಯ್ಯ ನಿವಾಸದ ಬಳಿ ನೂಕುನುಗ್ಗಲು, ತಳ್ಳಾಟ ಜೋರಾಗಿತ್ತು.

ಈ ಮಧ್ಯೆ ಸಿದ್ದರಾಮಯ್ಯ ಬೆಂಬಲಿಗರ ನಡುವೆಯಿಂದ ಕೆಪಿಸಿಸಿ ಕಚೇರಿಗೆ ಹೋಗಲು ಮುಂದಾಗಿದ್ದರು.

ಕಾರ್ಯಕರ್ತನೊಬ್ಬ ನಮ್ಮ ನಾಯಕನಿಗೆ ಟಿಕೆಟ್​ ನೀಡಿ ಎಂದು ಒತ್ತಾಯಿಸಿದ್ದಾನೆ. ಜನರ ಮಧ್ಯೆ ನೂಕಾಟದಲ್ಲಿ ಕೋಪದಲ್ಲಿದ್ದ ಸಿದ್ದರಾಮಯ್ಯ, ಕಾರ್ಯಕರ್ತನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನೂಕು-ನುಗ್ಗಲು ನಡುವೆ ಕೆಪಿಸಿಸಿ ಕಚೇರಿಗೆ ಸಿದ್ದರಾಮಯ್ಯ ಕಾರಿನಲ್ಲಿ ತೆರಳಿದರು.ಇದನ್ನು ಓದಿ –ಶ್ರೀರಂಗಪಟ್ಟಣದ ನೆರಳೆಕೆರೆಯಲ್ಲಿ ಚುನಾವಣಾಧಿಕಾರಿಗಳಿಂದ 440 ಸೀರೆ ಸೀಜ್

Share This Article
Leave a comment