Karnataka

ಕರುನಾಡ ಜಿಲ್ಲೆಗಳ ಕಿರು ಪರಿಚಯ -21- ಹಾಸನ

ಕಲಾವತಿ ಪ್ರಕಾಶ್
ಬೆಂಗಳೂರು

ಚನ್ನಕೃಷ್ಣಪ್ಪ ನಾಯಕ ೧೧ನೆ ಶತಮಾನದಲ್ಲಿ ಸ್ಥಾಪಿಸಿದ
ಸಿಂಹಾಸನಪುರದ ಸಂಕ್ಷಿಪ್ತ ರೂಪ ಹಾಸನ ಹೆಸರಾಗಿದೆ
ಹಾಸನಾಂಬೆ ದೇವಿಯ ಹೆಸರು ಎಂಬ ಪ್ರತೀತಿ ಇದೆ
ಇದು ವೀರ ಅರ್ಜುನನ ಮೊಮ್ಮಗನಿಗೆ ಸಂಬಂಧಿಸಿದೆ

ಹೊಯ್ಸಳ ಮೌರ್ಯ ಗಂಗ ಚಾಲುಕ್ಯ ರಾಷ್ಟರಕೂಟರು
ಚೋಳರು ವಿಜಯನಗರ ಮೈಸೂರರಸರು ಆಳಿದರು
ಹಾಸನ ಜಿಲ್ಲೆ ಹೊಯ್ಸಳ ವಾಸ್ತು ಶಿಲ್ಪಕೆಗಳ ನಾಡಾಗಿದೆ
ಮಲೆನಾಡ ಹೆಬ್ಬಾಗಿಲು ಬಡವರ ಊಟಿಯೆ ಇದಾಗಿದೆ

ಹಾಸನದೆಲ್ಲೆಡೆ ೮೦೦ ಕ್ಕೂ ಹೆಚ್ಚು ಶಾಸನ ದೊರೆತಿವೆ
ಮರಾಠಿ ಕನ್ನಡ ಸಂಸ್ಕೃತ ತಮಿಳು ಮಾರವಾಡಿ
ಮಹಾಜನಿಯಂತಹ ಭಾಷೆಗಳಲ್ಲಿದ್ದು ಕರ್ನಾಟಕದ
ಇತಿಹಾಸ ತಿಳಿಯಲು ಬಹಳ ಸಹಕಾರಿಯಾಗಿವೆ

ಹಾಸನ ಅರಸೀಕೆರೆ ಅರಕಲಗೂಡು ಬೇಲೂರು
ಚನ್ನರಾಯಪಟ್ಟಣ ಹೊಳೇನರಸೀಪುರ ಸಕಲೇಶಪುರ
ಶಾಂತಿಗ್ರಾಮ ಕೋಣನೂರು ಆಲೂರು ತಾಲ್ಲೂಕುಗಳು
ಕಾಫಿ ಮೆಣಸು ಆಲೂಗಡ್ಡೆ ಭತ್ತ ಕಬ್ಬು ಇಲ್ಲಿನ ಬೆಳೆಗಳು

ಆಲೂರಿನ ವಾಟೆಹೊಳೆ ಬೇಲೂರಿನ ಯಗಚಿ
ಗೊರೂರು ಅಣೆಕಟ್ಟು ಇಲ್ಲಿನ ಜಲಾಶಯಗಳು
ಹಾಸನದ ಹವಾಗುಣ ಬೆಚ್ಚನೆಯ ಮುಂಜಾನೆ
ತಂಪಾದ ಕೊರೆಯುವ ಚಳಿಯ ಸಂಜೆಗಳು

ಬೇಲೂರು ಹಳೇಬೀಡು ಶ್ರವಣಬೆಳಗೊಳ ಜೈನಮಠ
ಪಾರ್ವತಮ್ಮ ಬೆಟ್ಟ ಹುಲಿಕೆರೆ ಕೊಳ ಬಿಸಿಲೆಘಾಟ್
ಈಶ್ವರ ದೇವಸ್ಥಾನ ಲಕ್ಷ್ಮಿದೇವಿ ಗುಡಿ ಕೇದಾರೇಶ್ವರ
ಶೆಟ್ಟಿಹಳ್ಳಿ ಚರ್ಚ್ ಗಳು ಪ್ರಸಿದ್ಧ ಪ್ರವಾಸಿ ತಾಣಗಳು

ಬೇಲೂರ ಚನ್ನಕೇಶವ ಹಳೆಬೀಡ ಹೊಯ್ಸಳೇಶ್ವರ
ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪ ಕಲೆ ಹೊಯ್ಸಳ ವಾಸ್ತಶಿಲ್ಪದ ಬೀಡು ಬಳಪದ ಕಲ್ಲಿನದು
ಪ್ರಪಂಚದಲ್ಲೇ ಪ್ರಸಿದ್ಧ ಕಲೆಯ ಕೆತ್ತನೆ ಇಲ್ಲಿಹುದು

ಷಟ್ಪದಿ ಬ್ರಹ್ಮ ರಾಘವಾಂಕ ರಗಳೆಯ ಕವಿ ಹರಿಹರ
ನೇಮಿಚಂದ್ರರು ಬೆಲೂರ ಕೇಶವದಾಸರು ಹಾಗೂ
ಜಾನಪದ ಜಂಗಮ ಎಸ್ ಕೆ ಕರೀಂಖಾನ್ ಕವಿಗಳು
ಕುಮಾರ ಗಂದರ್ವ ಎಸ್ ವಿ ರಂಗಣ್ಣ ಶಾಂತರಸರು

Team Newsnap
Leave a Comment
Share
Published by
Team Newsnap

Recent Posts

ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು

ಬೆಂಗಳೂರು : ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ, ಮಂಡ್ಯದ ಹನಕೆರೆ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲು… Read More

May 12, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 12 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ದಾಖಲಾಗಿದೆ. 24… Read More

May 12, 2024

ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು

ನಮ್ಮ ಪೋಲಿಸರು ಸಮರ್ಥರಿದ್ದಾರೆ ⁠ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More

May 10, 2024

ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More

May 10, 2024

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ

ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More

May 10, 2024

ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More

May 10, 2024