ಮಹಾರಾಷ್ಟ್ರದಲ್ಲೂ 10 ಶಾಸಕರ ಜತೆ ಶಿವಸೇನಾ ಸಚಿವ ಸೂರತ್ ಎಸ್ಕೇಪ್

Team Newsnap
1 Min Read

ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಸ್ಫೋಟಕ. ಬೆಳವಣಿಗೆಯಲ್ಲಿ ಶಿವಸೇನಾ, ಕಾಂಗ್ರೆಸ್​ ಮತ್ತು ನ್ಯಾಷನಲ್​ ಕಾಂಗ್ರೆಸ್​ ಪಕ್ಷಗಳು ಸೇರಿಕೊಂಡು ರಚನೆ ಮಾಡಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಇದೀಗ ಬಿರುಕು ಮೂಡಿ, ಸರ್ಕಾರ ಬೀಳುವ ಆತಂಕವಿದೆ.

ಇದನ್ನು ಓದಿ – BMRCLನ ನಮ್ಮ ಮೆಟ್ರೋಗೆ ದಶಮಾನೋತ್ಸವದ ಸಂಭ್ರಮ : 3 ನೇ ಹಂತದ ಯೋಜನೆ ಸಿದ್ದತೆ

ಮಹಾ ಸರ್ಕಾರದಲ್ಲಿ ನಡೆದಿರುವ ಬೆಳವಣಿಗೆಯಲ್ಲಿ ಸಚಿವ ಹಾಗೂ ಶಿವಸೇನಾ ಪಕ್ಷದ ಪ್ರಮುಖ ನಾಯಕ ಏಕನಾಥ್​ ಶಿಂಧೆ ಅವರು ತಮ್ಮ ಪಕ್ಷದ 10 ಶಾಸಕರ ಜತೆ ಗುಜರಾತಿನ ಹೋಟೆಲ್​ಗೆ ಹೋಗಿ ಸೇರಿಕೊಂಡಿದ್ದಾರೆ.

ಮಹಾ ಅಘಾಡಿ ಸರ್ಕಾರದಿಂದ ಅಸಮಾಧಾನಗೊಂಡ ಶಿಂಧೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.ಈ ಒಂದು ಬೆಳವಣಿಗೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತವದ ಮಹಾ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

Share This Article
Leave a comment