ನಾಗಮಂಗಲ ಹಿರಿಯ ಪತ್ರಕರ್ತ ನಾಗರಾಜ್ ನಾಡಿಗೇರ್ ನಿಧನ

Team Newsnap
1 Min Read

ನಾಗಮಂಗಲದ ಹಿರಿಯ ಪತ್ರಕರ್ತ, ಬಾಬೀ ಎಂದೇ ಖ್ಯಾತರಾಗಿದ್ದ ನಾಗರಾಜ್ ನಾಡಿಗೇರ್ ಬುಧವಾರ ನಿಧನರಾದರು.

ಕಳೆದ 8 ವರ್ಷಗಳಿಂದಲೂ
ಅನಾರೋಗ್ಯ ಬಳಲುತ್ತಿದ್ದ ನಾಗರಾಜ್ ಅವರು ಸಾಕಷ್ಟು ಚಿಕಿತ್ಸೆ ಪಡೆದಿದ್ದರೂ, ಫಲಕಾರಿ ಆಗದೇ ಕೊನೆಯುಸಿರೆಳೆದರು. ‌

ತಂದೆ ಎಂ.ಜಿ.ನಾಡಿಗೇರ್, ಪತ್ನಿ ಲಕ್ಷ್ಮಿ,
ಮಗಳು ಸಿಂಧೂರ ಎನ್.ನಾಡಿಗೇರ್ ಹಾಗೂ ಸಹೋದರರಾದ ಉದಯ್, ಮಧುಕೇಶ್ ಸೇರಿದಂತೆ ಅನೇಕ ಮಿತ್ರರು, ಬಂಧು ಬಳಗದವರನ್ನು ಅಗಲಿದ್ದಾರೆ.

ನಾಗರಾಜ್ ನಿಧನಕ್ಕೆ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ನವೀನ್ ಚಿಕ್ಕ ಮಂಡ್ಯ ಹಾಗೂ ಸಂಘದ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು, ನಾಗಮಂಗಲ ತಾಲ್ಲೂಕಿನ ಪತ್ರಕರ್ತ ರಾದ ಸಿ‌. ಎನ್. ಮಂಜುನಾಥ್, ಸೀತಾರಾಮ್, ಬಾಲಕೃಷ್ಣ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.

Share This Article
Leave a comment