ಜೈಪುರ- ಮುಂಬಯಿ ರೈಲಿನಲ್ಲಿ RPF ಪೋಲಿಸ್ ಪೇದೆ ಗುಂಡಿನ ದಾಳಿ : ಎಎಸ್ಐ ಸೇರಿ ನಾಲ್ವರ ಹತ್ಯೆ

Team Newsnap
1 Min Read

ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಆರ್ ಪಿ ಎಫ್ ಪೋಲಿಸ್ ಪೇದೆಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬ ಎಎಸ್ ಐ ಸೇರಿ ನಾಲ್ವರು ಪ್ರಯಾಣಿಕರು ದುರ್ಮರಣಕ್ಕೀಡಾದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಬಳಿ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಬಳಿ ಚಲಿಸುತ್ತಿದ್ದ ಜೈಪುರ್ ಎಕ್ಸ್ ಪ್ರೆಸ್ ರೈಲಿನ ಎಸಿ ಕೋಚ್ ನಲ್ಲಿ ಗುಂಡಿನ ದಾಳಿ ನಡೆಯಿತು . ಆರ್ ಪಿಎಫ್ ಎಎಸ್ ಐ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ರೈಲು ಮುಂಬೈಗೆ ತೆರಳುತ್ತಿದ್ದಾಗ ಆರ್ ಪಿಎಫ್ ಸೈನಿಕ ಫೈರಿಂಗ್ ಮಾಡಿದ್ದಾನೆ. ಕಾರಣ ತಿಳಿದು ಬಂದಿಲ್ಲ.

ಗುಂಡಿನ ದಾಳಿ ನಡೆಸಿದ ಆರೋಪಿ ಪೇದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ರೈಲು ಜೈಪುರದಿಂದ ಮುಂಬಯಿ ಕಡೆಗೆ ಸಂಚರಿಸುತ್ತಿತ್ತು.ಆರೋಪಿ ಪೇದೆ ಚೇತನ್ ಸಿಂಗ್ (30).

ರೈಲ್ವೇ ರಕ್ಷಣಾ ಪಡೆಯ ಕಾನ್​ಸ್ಟೆಬಲ್ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.ಶ್ರೀರಂಗಪಟ್ಟಣ, ಮದ್ದೂರಿನ ಜಮೀನುಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡು

ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ವಾಪಿಯಿಂದ ಬೊರಿವಲಿಯಿಂದ ಮೀರಾ ರೋಡ್ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ.

Share This Article
Leave a comment