ಐವರು ದುಷ್ಕರ್ಮಿಗಳ ಗುಂಪೊಂದು ಗಡಿಪಾರು ಶಿಕ್ಷೆ ಅನುಭವಿಸಿ ಕೆಆರ್ ಪೇಟೆ ಪಟ್ಟಣಕ್ಕೆ ಹಿಂದಿರುಗಿದ್ದ ಕುಖ್ಯಾತ ರೌಡಿಯೊಬ್ಬನನ್ನು ಈಶ್ವರ ದೇವಸ್ಥಾನದ ಬಳಿ ಕೊಲೆ ಮಾಡಿ ಪರಾರಿಯಾಗಿದೆ. ಅರುಣ್ ಅಲಿಯಾಸ್ ಅಲ್ಲು(38) ಎಂಬ ರೌಡಿ ಹತ್ಯೆಗೆ ಈಡಾಗಿದ್ದಾನೆ.
ಈತ ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದನು. ಜೈಲಿನಲ್ಲಿ ಇದ್ದುಕೊಂಡೇ ಮಾರ್ವಾಡಿಯೊಬ್ಬನನ್ನು ಅಪಹರಿಸಿದ್ದನು. ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಜೈಲು ಸಿಬ್ಬಂದಿಗೂ ಶಿಕ್ಷೆಯಾಗಿತ್ತು.
ರಾಜಕಾರಣಿಗಳು, ವ್ಯಾಪಾರಸ್ಥರುಗಳಿಂದ ಹಪ್ತಾ ವಸೂಲಿ ಮಾಡುತ್ತಿದ್ದ ಅರುಣ್ ಜೈಲಿನಿಂದ ಬಿಡುಗಡೆಯಾದ ಬಳಿಕ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು.
ಸಂಚಾರಿ ಪೊಲೀಸರು ವಾಹನಗಳನ್ನು ತಡೆದು ದಾಖಲೆ ಪರಿಶೀಲಿಸುವಂತಿಲ್ಲ – DG ಆದೇಶ
ಇಂದು ದೇವಸ್ಥಾನದ ಬಳಿ ಬಂದಾಗ ಐವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ
ಕೆ ಆರ್ ಪೇಟೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.