February 19, 2026

Newsnap Kannada

The World at your finger tips!

accident,road,death

road accident in Malavalli:3 spot dead ಮಳವಳ್ಳಿ ಬಳಿ ಭೀಕರ ರಸ್ತೆ ಅಪಘಾತ : ಆಟೋಗೆ ಕಾರ್ ಡಿಕ್ಕಿ - ಮೂವರು ಧಾರುಣ ಸಾವು #Thenewsnap #latestnews #Accident #road_accident #Death #Malavalli #mandya #Mysuru #Bengaluru #india

ಮಳವಳ್ಳಿ ಬಳಿ ಭೀಕರ ರಸ್ತೆ ಅಪಘಾತ : ಆಟೋಗೆ ಕಾರ್ ಡಿಕ್ಕಿ – ಮೂವರು ಧಾರುಣ ಸಾವು

Spread the love

ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ 11.30 ರ ವೇಳೆಯಲ್ಲಿ ಮಳವಳ್ಳಿ ಸಮೀಪದ ಮಾರೇಹಳ್ಳಿ ಕಣಿಗಲ್ ಹಳ್ಳದ ಬಳಿ ಜರುಗಿದೆ.

ಮಳವಳ್ಳಿ – ಕೊಳ್ಳೇಗಾಲ ಹೆದ್ದಾರಿ ರಸ್ತೆಯ ಕಣಿಗಲ್ ಹಳ್ಳದ ಬಳಿ ಹೋಗುತ್ತಿದ್ದ ಆಟೋ ಗೆ ವೇಗವಾಗಿ ಬಂದ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದೆ ಆಗ ಆಟೋ ರಸ್ತೆ ಬದಿಯ ಹಳ್ಳದ ಪೊದೆಯೊಂದಕ್ಕೆ ತೂರಿಕೊಂಡಿದೆ.ಇದನ್ನು ಓದಿ –ಇಂಗ್ಲೆಂಡ್ PM ಸ್ಥಾನಕ್ಕೆ ಚುನಾವಣೆ: ಮುನ್ನಡೆ ಸಾಧಿಸಿದ ಸುಧಾ ಮೂರ್ತಿ ಅಳಿಯ ರಿಶಿ ಸುನಕ್

ಈ ವೇಳೆ ಆಟೋ ದಲ್ಲಿ ಇದ್ದ ಮೂವರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು‌ ಬೆಂಗಳೂರಿನ ಜೈಕರ್ನಾಟಕ‌ ಜನಪರ ವೇದಿಕೆ ರಾಜ್ಯ ಕಾರ್ಯದರ್ಶಿ ರವಿಕುಮಾರ್ (50) ಬಾಸ್ಕರ್ (48)ಹಾಗೂ ಆಟೋ ಚಾಲಕ ಮದ್ದೂರು ತಾಲ್ಲೂಕು ಹುಲಿಗೆರೆ ಪುರ ಗ್ರಾಮದ ಶ್ರೀನಿವಾಸ್ (35)ಎಂಬುವರೇ ಮೃತಪಟ್ಟವರು

ಮೂಲತಃ ಕಣಿಕಹಳ್ಳಿ ಗ್ರಾಮದ ವರಾದ ರವಿಕುಮಾರ್ ಅವರ ಊರಿಗೆ ಈ ಮೂವರು ಆಟೋದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದೆ.

ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ಸಹ ಜಖಂ ಗೊಂಡಿದೆ. ಕಾರಿನಲ್ಲಿ ಇದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.ಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!