ರಾಮನಗರ: ನಕಲಿ ಐಎಎಸ್ ಅಧಿಕಾರಿ ಬಂಧನ

Team Newsnap
1 Min Read

ನಕಲಿ ಐಎಎಸ್ ಅಧಿಕಾರಿ ಯೊಬ್ಬನನ್ನು ಕಗ್ಗಲೀಪುರ ಪೊಲೀಸರು ಇಂದು ಬಂಧಿಸಿದರು.

ಮಹಾರಾಷ್ಟ್ರ ಮೂಲದ ಶಶೀರ್(24) ಬಂಧಿತ. ಕಳೆದ ಮೂರು ವರ್ಷದಿಂದ ಕಗ್ಗಲಿಪುರದಲ್ಲೇ ವಾಸವಾಗಿದ್ದ ಶಶೀರ್, ಡಿಪ್ಲೊಮಾ ಓದಿ, ತಾನು ಐಎಎಸ್​ ಅಧಿಕಾರಿ, ಮಿನಿಸ್ಟರಿ ಆಫ್ ಹೋಮ್ ಅಫೈರ್​ನಲ್ಲಿ ಅಧಿಕಾರಿಯಾಗಿದ್ದೇನೆ ಎಂದು ಬಿಂಬಿಸಿಕೊಂಡಿದ್ದ.

ಸ್ಥಳೀಯ ಪೊಲೀಸರ ಬಳಿಯೂ ತಾನು ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದ ಈತ
ರವಿಶಂಕರ್ ಗುರೂಜಿ ಆಶ್ರಮಕ್ಕೂ ಭೇಟಿ ಕೊಟ್ಟಿದ್ದನು. ತಾನು ಐಎಎಸ್​ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ಆರ್ಟ್​ ಆಫ್​ ಲಿವಿಂಗ್​ ಆಶ್ರಮಕ್ಕೆ ಸಂಬಂಧಿಸಿದ ಜಮೀನು ವಿವಾದಕ್ಕೂ ಪ್ರವೇಶ ಮಾಡಿ ಗುರೂಜಿ ಪರ ಬ್ಯಾಟಿಂಗ್​ ಮಾಡಿದ್ದ.

ರವಿಶಂಕರ್ ಗುರೂಜಿ ಆಶ್ರಮದ ಜಮೀನು ವಿವಾದದ ಪರಿಹಾರ ಮಾಡಿಕೊಡುವುದಾಗಿ ಹೇಳಿದ್ದ ಶಶೀರ್​, ನಿಮ್ಮ ಜಮೀನು ವಿವಾದವನ್ನು ಬಗೆಹರಿಸಿಕೊಡುವುದಾಗಿ ಹೇಳಿದ್ದ.

ಶಶೀರ್​ನ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ವಿಚಾರ ಮಾಡಿದಾಗ ಅಸಲಿಯತ್ತು ಬಯಲಾಗಿದೆ.

ಮಂಗಳವಾರ ರಾತ್ರಿ ನಕಲಿ ಐಎಎಸ್​ ಅಧಿಕಾರಿಯನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Share This Article
Leave a comment