ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ 11 ದಿನ.ಈ ಸಂದರ್ಭದಲ್ಲಿ ದೊಡ್ಮನೆ ಕುಟುಂಬ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸಿತು.
ದೊಡ್ಮನೆ ಕುಟುಂಬ ಸಂಪ್ರದಾಯದಂತೆ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ 11ನೇ ದಿನದ ಕಾರ್ಯ ಅಂಗವಾಗಿ ಪೂಜಾ ಕಾರ್ಯಕ್ರಮ ನಡೆಸಿದ ನಂತರ ಕಂಠೀರವ ಸ್ಟುಡಿಯೋದಲ್ಲಿ ಪತ್ನಿ ಅಶ್ವಿನಿ, ದೃತಿ, ವಂದಿತಾ ಸೇರಿದಂತೆ ಇಡೀ ಕುಟುಂಬ ಆಗಮಿಸಿತ್ತು
ಈ ಪುಣ್ಯಸ್ಮರಣೆಯಲ್ಲಿ ಸಿಎಂ ಬೊಮ್ಮಾಯಿ, ಶಿವಣ್ಣ, ರಾಘವೇಂದ್ರ ರಾಜಕುಮಾರ್ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಸಮಾಧಿ ಪೂಜಾ ಕಾರ್ಯಕ್ರಮದಲ್ಲ ಪಾಲ್ಗೊಂಡಿದ್ದರು
ರಜನಿಕಾಂತ್, ಅಮಿತಾಬಚ್ಚನ್ ಅನೇಕ ನಟರು ಆಗಮಿಸುವ ನಿರೀಕ್ಷೆ ಇದೆ. ಸುಮಾರು 1,500 ಜನ ಈ ಭಾಗಿಯಾಗುವ ಸಾಧ್ಯತೆ ಇದೆ. ಮನೆಯ ಮುಂಭಾಗದಲ್ಲಿ ಈಗಾಗಲೇ ಬೃಹತ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ.
‘ದೊಡ್ಮನೆ’ಯಿಂದ
ದೇವರುಗಳಿಗಾಗಿ ದೊಡ್ಮನೆ ಕುಟುಂಬ ನವೆಂಬರ್ 9 (ನಾಳೆ)ಅಪ್ಪು ಸ್ಮರಣೆಯನ್ನು ಆಯೋಜಿಸಿದೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಕಾರ್ಯಕ್ರಮ ನಡೆಯಲಿದೆ.