ಸಂಭಾವನೆ ಪಡೆಯದೆ ಅಪ್ಪು ಇ-ಸೈಕಲ್​ ಗಿಫ್ಟ್ ಪಡೆದು ಮಗುವಿನಂತೆ ರೈಡ್​ ಮಾಡಿದರು..

Team Newsnap
1 Min Read

ನಟ ಪುನೀತ್​ ರಾಜ್​ಕುಮಾರ್​​ ಕೊರೊನಾ ಸಂದರ್ಭದಲ್ಲಿ ಕೊರೊನಾ ಜಾಗೃತಿಗಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನ ಮಾಡಿದ್ದಾರೆ

ಸ್ಯಾಂಡಲ್‌ವುಡ್ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಅಪ್ಪು ಸರ್ ಜೊತೆಗೆ ಕೊರೊನಾ ಜಾಗೃತಿ ಅಭಿಯಾನದ ಪ್ರೋಮೋ ಶೂಟ್ ಮಾಡಲಾಗಿತ್ತು.

ಈ ವೇಳೆ ಅಪ್ಪು ಸರ್​, ಹಣ ಪಡೆಯಲು ನಿರಾಕರಿಸಿದ್ದರಿಂದ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಇ-ಸೈಕಲ್ ನೀಡಲು ನಿರ್ಧಾರ ಮಾಡಲಾಯಿತು

ಈ ವೇಳೆ ಅಪ್ಪು ಅನಗತ್ಯ ಉಡುಗೊರೆಯಾಗಿರಬಹುದು ಎಂದು ಭಾವಿಸಲಿಲ್ಲ. ಅವರು ಇ-ಸೈಕಲ್ ಅನ್ನು ಕುತೂಹಲದಿಂದ ನೋಡಿದರು. ಇಷ್ಟವಾಯಿತು, ನಮಗೆ ಧನ್ಯವಾದ ತಿಳಿಸಿದರು. ಮಕ್ಕಳಂತೆ ಇ-ಸೈಕಲ್​ಅನ್ನು ರೈಡ್ ಮಾಡ್ತಾ ಇದ್ದರು ಎಂದು ನಿತಿನ್ ಕೃಷ್ಣಮೂರ್ತಿ ಪೋಸ್ಟ್​ ತಿಳಿಸಿದ್ದಾರೆ.

Share This Article
Leave a comment