ಪಿಎಸ್ಐ ಹಗರಣದಲ್ಲಿ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಪಿಎಸ್ಐ ಅಕ್ರಮದಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ. ಬಂಧಿತ ಆರೋಪಿಗಳು ದಿನಕ್ಕೊಂದು ಸತ್ಯ ಬಾಯ್ಬಿಡಲಾರಂಭಿಸಿದ್ದಾರೆ. ಇದನ್ನು ಓದಿ –ಸುರತ್ಕಲ್ ಫಾಜಿಲ್ ಹತ್ಯೆಗೆ ಸಾಥ್ ನೀಡಿದ್ದ ಕಾರ್ ಚಾಲಕ ಕಂ ಮಾಲೀಕ ಅಜಿತ್ ಬಂಧನ
ಪ್ರಕರಣ ಬಯಲಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಒಬ್ಬೊಬ್ಬರಾಗಿ ಸಿಐಡಿ ಬಲೆಗೆ ಬೀಳುತಿದ್ದಾರೆ. ಪ್ರಕರಣ ಸಂಬಂಧ ಏಜೆಂಟ್ ಆಗಿ ಕಾರ್ಯನಿರ್ವಹಿಸ್ತಿದ್ದ ಪ್ರಮುಖ ಆರೋಪಿ ಸಿಐಡಿ ಬಲೆಗೆ ಬಿದ್ದಿದ್ದಾನೆ. ಪಿಎಸ್ಐ ಶರೀಫ್ ಕಲಿಮಠ್ ಬಂಧಿತ ಆರೋಪಿಯಾಗಿದ್ದಾನೆ
2017ರ ಬ್ಯಾಚ್ನ ಪಿಎಸ್ಐ ಆಗಿರುವ ಶರೀಫ್ ಕಲಿಮಠ್ಪಿ ಎಸ್ಐ ಪರೀಕ್ಷಾ ಅಕ್ರಮ ಪ್ರಕರಣ ಹೊರಬರ್ತಿದ್ದಂತೆ ಎಸ್ಕೇಪ್ ಆಗಿದ್ದ. ಈಗಾಗಲೇ ಬಂಧಿತ ಆರೋಪಿ ಎಸ್ಡಿಎ ಹರ್ಷಾ ಮತ್ತು ಅಭ್ಯರ್ಥಿಗಳೊಂದಿಗೆ ಶರೀಫ್ ನಿರಂತರ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ.
ಅಲ್ಲದೇ ಸುಮಾರು 10 ಜನ ಆಭ್ಯರ್ಥಿಗಳಿಂದ ಹಣ ಪಡೆದುಕೊಂಡು ಎಸ್ಡಿಎ ಹರ್ಷಾನಿಗೆ ನೀಡಲಾಗಿತ್ತು ಎನ್ನುವ ಆರೋಪ ಇದೆ.
ಸತತ ಮೂರು ತಿಂಗಳಿಂದ ಶರೀಫ್ ಕಲಿಮಠ್ ತಲೆಮಾರಿಸಿಕೊಂಡಿದ್ದ. ಇದೀಗ ಶರೀಫ್ ಕಲಿಮಠನನ್ನ ಸಿಐಡಿ ಮುಂಬೈನಲ್ಲಿ ಬಂಧಿಸಿದೆ. ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ