‘ನ್ಯಾಯಕೊಡಿಸಿ ಇಲ್ಲದೇ ಹೋದರೆ ಟೆರರಿಸ್ಟ್​ಗಳ ಜೊತೆ ಸೇರುತ್ತೇವೆ- ಮೋದಿಗೆ PSI ಅಭ್ಯರ್ಥಿಗಳ ಪತ್ರ

Team Newsnap
1 Min Read

ನ್ಯಾಯಕೊಡಿಸದಿದ್ರೆ ಟೆರರಿಸ್ಟ್​ಗಳ ಜೊತೆ ಕೈಜೋಡಿಸುತ್ತೇವೆ ಎಂದು ನೊಂದ ಪಿಎಸ್​ಐ (PSI) ಅಭ್ಯರ್ಥಿಗಳು ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆದಿದ್ದಾರೆ. 

ರಕ್ತದಲ್ಲಿ ಎರಡು ಪುಟಗಳ ಪತ್ರ ಬರೆದು ನ್ಯಾಯ ಓದಗಿಸುವಂತೆ ಅವರು ಮನವಿ ಮಾಡಿ ಪರೀಕ್ಷೆ ಆಯ್ಕೆಯಲ್ಲಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು. ಪಿಎಸ್​ಐ ಪರೀಕ್ಷೆಯಲ್ಲಿ ಅನ್ಯಾಯ ಮಾಡಿದವರನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನು ಓದಿ : ಕಾಶ್ಮೀರ TO ಕನ್ಯಾಕುಮಾರಿ ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ಸಂಕಲ್ಪ

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಮಾತ್ರ ಎನ್ನುವ ಪರಿಸ್ಥಿತಿಯಿದೆ. ಸರ್ಕಾರದ ಈ ವ್ಯವಸ್ಥೆಯಿಂದ ಮಾನಸಿಕವಾಗಿ ಸತ್ತುಹೋಗಿದ್ದೇವೆ.ಇನ್ಮುಂದೆ ಸರ್ಕಾರಿ ಹುದ್ದೆ ಪರೀಕ್ಷೆಗಳನ್ನು ಬರೆಯಲಾಗುವುದಿಲ್ಲ. ಟೆರೆರಿಸ್ಟ್​ಗಳ ಜೊತೆ, ನಕ್ಸಲ್​ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರಿಂದ ಹಣ ಪಡೆದು ಬಡ ಕುಟುಂಬಕ್ಕೆ ಸಹಾಯ ಮಾಡುತ್ತೇವೆ ಎಂದು ಹೇಳಿ ನಾವು 8 ಮಂದಿ ಇದ್ದೇವೆ, ನಾವೆಲ್ಲಾ ಈ ನಿರ್ಧಾರ ಮಾಡಿದ್ದೀವಿ ಎಂದು ನೊಂದ ಪಿಎಸ್ಐ ಅಭ್ಯರ್ಥಿಗಳಿಂದ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

Share This Article
Leave a comment