ಬೆಂಗಳೂರು ಚರ್ಚ್​​ನಲ್ಲಿ ರಜನೀಕಾಂತ್ ಮಗಳ ಆರೋಗ್ಯಕ್ಕಾಗಿ ಪ್ರಾರ್ಥನೆ

Team Newsnap
0 Min Read

ಸೂಪರ್ ಸ್ಟಾರ್ ರಜಿನಿಕಾಂತ್ ಮಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಚರ್ಚ್​ಗೆ ಹರಕೆ ಕಟ್ಟಿಕೊಂಡಿದ್ದರಿಂದ
ನಿನ್ನೆ ಬೆಂಗಳೂರಿಗೆ ಧಾವಿಸಿ ಬಂದು ಚರ್ಚ್ ನಲ್ಲಿ ಮಗಳ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.

ಕಳೆದ ತಿಂಗಳು ರಜಿನಿಕಾಂತ್ ಹನುಮಂತನಗರದಲ್ಲಿರುವ ಸ್ನೇಹಿತನನ್ನು ಕಳೆದುಕೊಂಡಿದ್ದರು, ಆದರೆ ವೈಯಕ್ತಿಕ ಕಾರಣಗಳಿಂದ ಸ್ನೇಹಿತನ ಅಂತಿಮ ಯಾತ್ರೆಯಲ್ಲಿ ರಜಿನಿಕಾಂತ್ ಪಾಲ್ಗೊಳ್ಳಲಿಲ್ಲ.

ಹೀಗಾಗಿ ನಿನ್ನೆ ಬೆಳಗ್ಗೆ 9.30ಕ್ಕೆ ಸ್ನೇಹಿತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ರಾತ್ರಿ 7:30ರ ವಿವೇಕನಗರದ ಇನ್​​ಫೆಂಟ್ರಿ ಚರ್ಚ್​​ಗೆ ತಲೈವಾ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ರಾತ್ರಿ 9.30ರ ಸುಮಾರಿಗೆ ಸೂಪರ್ ಸ್ಟಾರ್ ಚೆನ್ನೈಗೆ ಮರಳಿದ್ದಾರೆ.

Share This Article
Leave a comment