ಕೊಂಡೋತ್ಸವದ ಕೊಂಡಕ್ಕೆ ಬಿದ್ದು ಪೂಜಾರಿಗೆ ತೀವ್ರ ಗಾಯ

Team Newsnap
0 Min Read

ಮಂಡ್ಯ : ಪೂಜಾರಿಯೊಬ್ಬರು ಮದ್ದೂರಿನ ಕೊಂಡೋತ್ಸವದ ಕೊಂಡವನ್ನು ಹಾಯುವ ಸಂದರ್ಭದಲ್ಲಿ ಆಯತಪ್ಪಿ ಕೊಂಡಕ್ಕೆ ಬಿದ್ದು, ತೀವ್ರಗಾಯವಾಗಿರುವ ಘಟನೆ ನಡೆದಿದೆ.

ಮದ್ದೂರು ತಾಲೂಕಿನ ಹುಲುಗನಹಳ್ಳಿಯಲ್ಲಿ ಬಸವೇಶ್ವರ ಕೊಂಡೋತ್ಸವದ ವೇಳೆಯಲ್ಲಿ ವೀರಗಾಸೆಯ ಪೂಜಾರಿ ಕೊಂಡವನ್ನು ಹಾಯೋದಕ್ಕೆ ಓಡಿ ಹೋಗುತ್ತಿದ್ದು , ಕೊಂಡದಲ್ಲಿ ಓಡಿ ಹೋಗುತ್ತಾ ಹಾದು ಹೋಗುತ್ತಿದ್ದಾಗ ಆಯತಪ್ಪಿ ವೀರಗಾಸೆ ಪೂಜಾರಿ ಬಿದ್ದಿದ್ದಾರೆ.

ಅಲ್ಲಿದಂತ ಜನರು ಕೂಡಲೇ ಅವರನ್ನು ಎತ್ತಿ ಸಂತೈಸಿದ್ದಾರೆ . ಬಿಗ್ ಬಾಸ್ ಖ್ಯಾತಿ ಸೋನುಗೌಡ ಬಂಧನ 

ಆದರು ಬೆಂಕಿಯ ಕೆಂಡದಿಂದ ಅವರಿಗೆ ತೀವ್ರವಾದಂತ ಸುಟ್ಟಗಾಯವಾಗಿ ಅವರನ್ನು ಕೂಡಲೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Share This Article
Leave a comment