ಖಡಕ್ ಅಧಿಕಾರಿಯ ನೇಮಕಕ್ಕೆ ತಡೆ ಹಿಡಿದ ಸರ್ಕಾರ ಮಂಡ್ಯ ರಾಜಕಾರಣಿಗಳು ಒತ್ತಡಕ್ಕೆ ಮಣಿದು ಎಸ್ಪಿ ಸುಮನ್ ಡಿ ಪೆನ್ನೇಕರ್ ಮಂಡ್ಯಕ್ಕೆ ಬರುವುದನ್ನು ತಡೆಯುವ ಕುತಂತ್ರ ವ್ಯವಸ್ಥಿತವಾಗಿ ನಡೆದಿದೆ.
ಮಂಡ್ಯ ನೂತನ ಎಸ್ಪಿಯಾಗಿ ಸುಮನ್ ಡಿ ಪೆನ್ನೇಕರ್ ಇಂದು ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ ದಕ್ಷ ಅಧಿಕಾರಿ ಸುಮನ್ ಆಗಮನಕ್ಕೆ ಬೆದರಿದ ಮಂಡ್ಯ ರಾಜಕಾರಣಿಗಳು ಈ ವರ್ಗಾವಣೆ ರದ್ದು ಮಾಡಿ, ಹೊಂದಾಣಿಕೆ ಮಾಡಿಕೊಂಡು ಹೋಗುವ ಅಧಿಕಾರಿಯೊಬ್ಬರನ್ನು ನೇಮಕ ಮಾಡಿಸುವ ಹುನ್ನಾರ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಅಧಿಕಾರ ಸ್ವೀಕರಿಸಬೇಕಿದ್ದ ಸುಮನ್ ಗೆ ಇನ್ನೂ 2 ದಿನ ಅಧಿಕಾರ ವಹಿಸಿಕೊಳ್ಳದಂತೆ ಸರ್ಕಾರದ ಡಿಪಿಎಆರ್ ವಿಭಾಗ ಮೌಖಿಕ ಸೂಚನೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಜ್ಯ ಸರ್ಕಾರ ನಿನ್ನೆಯಷ್ಟೇ ಆಡಳಿತ ದೃಷ್ಟಿಯಿಂದ 9 ಮಂದಿ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿತ್ತು. ಅದರಲ್ಲಿ ಮಂಡ್ಯ ಎಸ್ಪಿ ಸ್ಥಾನ ಕೂಡಾ ಒಂದು.
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ